ಮಂಡ್ಯ: ಜೆಡಿಎಸ್ ಬಿಟ್ಟು ಹೋದ ಮಹಾನ್ ನಾಯಕ, ನನ್ನನ್ನು ಬಿಟ್ಟರೆ ಇನ್ಯಾರೂ ಇಲ್ಲ ಅಂತಿರೋ ಬೆಂಗಳೂರಿನ ವ್ಯಕ್ತಿಗೆ ಸರಿಸಮನಾದ ಕುಸ್ತಿ ಪಟುವನ್ನು ನಾಳೆ ತಿಳಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಜಮೀರ್ ಅಹಮದ್'ಗೆ ಟಾಂಗ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ನಡೆದ ರೈತ ಚೈತನ್ಯ ಯಾತ್ರೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾನು ಸಿದ್ದರಾಮಯ್ಯ ಅವರನ್ನು ಸಿದ್ದರಾಮು ಅಂತಾ ಕರೀತಿದ್ದೆ. ಆದರೆ ಅವರು ಈಗ ದೊಡ್ಡವರಾಗಿದ್ದಾರೆ. ನಾನಿರುವಾಗಲೇ 7 ಜನರನ್ನು ಪಕ್ಷದಿಂದ ಕರೆದುಕೊಂಡಿದ್ದೀರಿ. ಈ ಗರ್ವ ಎಲ್ಲಿಂದ ಬಂತು ಸಿದ್ದರಾಮಯ್ಯ? ಅಧಿಕಾರ ಬಂದ ತಕ್ಷಣ ದೊಡ್ಡವರಾಗಿಬಿಟ್ರಾ" ಎಂದು ದೇವೇಗೌಡರು ಖಾರವಾಗಿ ನುಡಿದರು.


ಮುಂದುವರೆದು, ಸಿದ್ದರಾಮಯ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಬಗ್ಗೆ ಪ್ರಸ್ತಾಪಿಸಿದ ದೇವೇಗೌಡರು, "ನಮ್ಮ ರೈತರಿಗೆ ನೀರು ಕೊಟ್ಟರೆ ಸಿನ ತೆಗೀತಾರೆ. ಅಂತಹ ಜನಕ್ಕೆ ನಿಮ್ಮ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಏಕೆ ಬೇಕು? ನಮ್ಮ ರಾಜ್ಯದ ಜನ ಸಿದ್ದರಾಮಯ್ಯ ಅವರನ್ನು ಊಟ ಕೊಡಿ ಅಂತಾ ಯಾವತ್ತೂ ಕೇಳಿಲ್ಲ" ಎಂದು  ಟೀಕಿಸಿದರು.


ಹಾಗಾದರೆ ಜಮೀರ್ ಅಹಮದ್ ಖಾನ್ ವಿರುದ್ಧ ದೇವೇಗೌಡರು ಯಾವ ವ್ಯಕ್ತಿಯನ್ನು ಘೋಶಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.