ಬೆಂಗಳೂರು: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವಿನ ಬಗ್ಗೆ  ವಿಶ್ವಾಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಶಿವಮೊಗ್ಗದ ಶಿಕಾರಿಪುರದಲ್ಲಿ ನಾಪಪತ್ರ ಸಲ್ಲಿಸುವುದಕ್ಕೂ ಮುಂಚೆ  ಪತ್ರಕರ್ತರೊಂದಿಗೆ ಮಾತನಾಡಿದ ಅವರು " ನಾನು ಚುನಾವಣೆಯಲ್ಲಿ  30 ರಿಂದ 40 ಸಾವಿರ ಮುನ್ನಡೆ ಪಡೆಯಲಿದ್ದೇನೆ ಮತ್ತು ಪ್ರತಿಯೊಬ್ಬರೂ ನಮ್ಮ ಸಮುದಾಯದ ಜನರನ್ನು ನನ್ನನ್ನು ಬೆಂಬಲಿಸುತ್ತಿದ್ದಾರೆ" ಎಂದು ಯಡಿಯೂರಪ್ಪ ಹೇಳಿದರು.


ಇದೇ ಸಂದರ್ಭದಲ್ಲಿ ಲಂಡನ್ ನಲ್ಲಿ ಬಸವಣ್ಣನವರ ಕುರಿತಾಗಿ ಮೋದಿ ಮಾತನಾಡಿರುವುದರ ಬಗ್ಗೆ ಹೇಳಿದ ಅವರು ಇದು ಲಿಂಗಾಯತ್ ಮತ್ತು ವೀರಶೈವರನ್ನು ಒಡೆಯಲು ಹೊರಟವರಿಗೆ ನೀಡಿದಂತಹ ಸ್ಪಷ್ಟ ಸಂದೇಶವಾಗಿದೆ ಎಂದರು.


224 ಸ್ಥಾನಗಳಿಗಾಗಿ ಇದೇ ಮೇ 12 ರಂದು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ 15 ರಂದು ಫಲಿತಾಂಶವು ಹೊರಬರಲಿದೆ.