ಬೆಂಗಳೂರು: ಕಂಠೀರವ ಒಳಾಂಗಣದಲ್ಲಿ ಕ್ರೀಡಾಂಗಣ ಬಿಜೆಪಿ ವತಿಯಿಂದ ನಡೆದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದ ವೇಳೆ ನಿರೂಪಕಿ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಕಾರ್ಯಕ್ರಮದಲ್ಲಿ ಜನರನ್ನು ಹುರಿದುಂಬಿಸಲು ಆಗಾಗ ಚಪ್ಪಾಳೆ ಹೊಡೆದರೆ ಆರೋಗ್ಯಕ್ಕೆ ಒಳ್ಳೆಯದು, ಹಾರ್ಟ್ ಅಟ್ಯಾಕ್ ಆಗಲ್ಲ, ಬಿಪಿ ಬರಲ್ಲ ಎನ್ನುತ್ತಿದ್ದ ನಿರೂಪಕಿ ಪ್ರತಿಭಾ ಗೌಡಗೆ ಸಿಎಂ ಭಾಷಣದ ಮೂಲಕ ಕೌಂಟರ್ ನೀಡಿದ್ದಾರೆ.


ಇದನ್ನೂ ಓದಿ : ಜಿಯೋ 5G ಫೋನ್ ಬಿಡುಗಡೆಗೆ ಸಿದ್ಧ: ಇದರ ಬೆಲೆ ಇಷ್ಟೊಂದು ಕಡಿಮೆನಾ?


ಸಿಎಂ ಭಾಷಣ ಮಾಡಲು ಬರುತ್ತಿದ್ದಂತೆಯೇ ಯಾರೂ ಎದ್ದು ಹೋಗಬಾರದು ಎಂದು ಮನವಿ ಮಾಡಿಕೊಳ್ಳುತ್ತಾ ಇನ್ನೂ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳಿವೆ ಎಂದು ನಿರೂಪಕಿ ಹೇಳುತ್ತಿದ್ದರು, ಆಗ ನೀ ಈಗ ಸ್ವಲ್ಪ ಸುಮ್ಮನಿದ್ದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಬೊಮ್ಮಾಯಿ ನಿರೂಪಕಿಗೆ ಹೇಳಿದ್ದಾರೆ.ಆಗ ಇದಕ್ಕೆ ಅವರು ನಗೆ ಸೂಸುವ ಮೂಲಕ ಸುಮ್ಮನಾಗಿದ್ದಾರೆ ಈಗ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.