ಬೆಂಗಳೂರು: ಜೆಡಿಎಸ್ ಪಕ್ಷವನ್ನು ಪುಟಗೋಸಿ ಪಕ್ಷ ಎಂದು ಹಿಯಾಳಿಸಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ದ ಜೆಡಿಎಸ್ ಕಾರ್ಯಕರ್ತರು ನಾಳೆ ಪುಟಗೊಸಿ ಚಳವಳಿ ನಡೆಸಲು ಮುಂದಾಗಿದ್ದಾರೆ 


COMMERCIAL BREAK
SCROLL TO CONTINUE READING

ಇತ್ತೀಚಿಗೆ ಅನಂತ್ ಕುಮಾರ್ ಹೆಗಡೆ ಜೆಡಿಎಸ್ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ಟಿಕಿಸಿಸುತ್ತಾ ಪುಟಗೋಸಿ ಪಕ್ಷ ಎಂದು ಕರೆದಿದ್ದರು. ಅಲ್ಲದೆ  ಕಾಂಗ್ರೆಸ್ ಪಕ್ಷವು ಪುಟಗೋಸಿ ಜೊತೆಗೆ ಮಂಡಿವೂರಿ ಕುಳಿತಿದೆ ಎಂದು ಕಿಡಿಕಾರಿದ್ದರು. ಈಗ ಜೆಡಿಎಸ್‌ಗೆ ಪುಟಗೋಸಿ ಎಂದಿದ್ದಕ್ಕೆ  ಮಂಡ್ಯ ಯುವಕರ ತಂಡವು ನಾಳೆ ಸೋಶಿಯಲ್ ಮಿಡಿಯಾದಲ್ಲಿ ಪುಟಗೋಸಿ ಚಳವಳಿ ಮಾಡಲು ಸಿದ್ಧತೆ ಮಾಡಿಕೊಂಡಿದೆ.ನಾಳೆ ಈ ವಿನೂತನ ಚಳವಳಿಯಲ್ಲಿ 100 ಅಧಿಕ ಪುಟಗೋಸಿ ಪೋಸ್ಟ್ ಗಳನ್ನು ಸೋಶಿಯಲ್ ಮಿಡಿಯಾದಲ್ಲಿ  ಈ ತಂಡವು ಹಂಚಿಕೊಳ್ಳಲಿದೆ ಎಂದು ತಿಳಿದುಬಂದಿದೆ. 


ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು  ಈ ಹಿಂದೆ ದಲಿತರು ಮತ್ತು ಸಂವಿಧಾನದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ವಿವಾಧಕ್ಕೆ ಒಳಗಾಗಿದ್ದರು, ನಂತರ ಇದಕ್ಕೆ  ಭಾರಿ ಪ್ರತಿಭಟನೆ ವ್ಯಕ್ತವಾದ ನಂತರ  ಸಂಸತ್ ನಲ್ಲಿ ಕ್ಷಮೆಯಾಚಿಸಿದ್ದರು.