ಬೆಂಗಳೂರು: ಇನ್ನು ಒಂದು ತಿಂಗಳೊಳಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.ಆದ್ದರಿಂದ ಮತದಾನದ ಜಾಗೃತಿಯನ್ನು ಜನರಲ್ಲಿ ಮುಟ್ಟಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಚುನಾವಣಾ ಧ್ಯೇಯ ಗೀತೆಯನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ಟರ ರಚನೆಯಲ್ಲಿ ಮೂಡಿ ಬಂದಿರುವ ಈ ಗೀತೆಗೆ ವಿಜಯ ಪ್ರಕಾಶ ಹಿನ್ನಲೆಗಾಯನವನ್ನು ನೀಡಿದ್ದಾರೆ ಮತ್ತು ವಿ.ಹರಿಕೃಷ್ಣರವರು ಸಂಗೀತ ನಿರ್ದೇಶನವನ್ನು ನೀಡಿದ್ದಾರೆ. ಏಪ್ರಿಲ್ 13 ರಂದು ಬಿಡುಗಡೆಯಾಗಿರುವ ಈ ಗೀತೆ ಈಗಾಗಲೇ ಯೂಟೂಬ್ ನಲ್ಲಿ ಸಾಕಷ್ಟು ಸದ್ದನ್ನು ಮಾಡುತ್ತಿದೆ.