ಬೆಂಗಳೂರು: ಪಲಾಯನವಾದಿ ಪ್ರತಾಪ್ ಸಿಂಹ ಅವರೇ ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟಿದ್ದೇಕೆ ಎಂದು ಕೇಳಿದರೆ ಚಾಮುಂಡೇಶ್ವರಿಗೆ ಗೊತ್ತು ಅಂತೀರಿ, ನಿಮ್ಮ ತಮ್ಮ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮರಗಳನ್ನು ಕಡಿದಿದ್ದೇಕೆ ಎಂದು ಕೇಳಿದರೆ ಡಾ.ಯತೀಂದ್ರ ಸಿದ್ದರಾಮಯ್ಯರ ಕಡೆ ಕೈ ತೋರಿಸುತ್ತೀರಿ. ತಮ್ಮ ಗುರು ಮೋದಿಯವರಂತೆ ವಿಷಯಾಂತರ ಮಾಡುವಲ್ಲಿ, ದಿಕ್ಕು ತಪ್ಪಿಸುವಲ್ಲಿ ತಾವೂ ಕೂಡ “ಬ್ರಿಲಿಯಂಟ್ ಪೊಲಿಟಿಷಿಯನ್” ಅಲ್ಲವೇ ಪ್ರತಾಪ್ ಸಿಂಹ ಅವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


COMMERCIAL BREAK
SCROLL TO CONTINUE READING

ಹಾಸನ ಜಿಲ್ಲೆ ಬೇಲೂರು ತಾಲೂಕಿನ ನಂದಗೊಂಡನ ಹಳ್ಳಿಯಲ್ಲಿ 125ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹರ ಸಹೋದರ ವಿಕ್ರಂ ಸಿಂಹರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.


‘ಫೋಟೋಶೂಟ್’ ಮಾಡಿಸ್ಬೇಡ ಎಂದ ಪೋಷಕರು: ವಿದ್ಯಾರ್ಥಿನಿ ಆತ್ಮಹತ್ಯೆ..!


‘ಪ್ರತಾಪ್ ಸಿಂಹ ಅವರೇ, ತಮ್ಮ ಪ್ರತಾಪ ಬ್ಯಾರಿಕೆಡ್ ಹಾರುವುದರಲ್ಲಿ ಅಷ್ಟೇ ಅಲ್ಲ, ವಾಸ್ತವಿಕ ಪ್ರಶ್ನೆಗಳಿಗೆ ವಿಷಯಾಂತರ ಮಾಡದೆ ನೇರವಾಗಿ ಉತ್ತರಿಸುವುದರಲ್ಲೂ ನಿಮ್ಮ ಪ್ರತಾಪ ತೋರಿಸಿ. ನಿಮ್ಮ ಸಹೋದರ ಜಮೀನು ಗುತ್ತಿಗೆ ಪಡೆದಿದ್ದು ನಿಜವಲ್ಲವೇ? ನಿಜಕ್ಕೂ ಶುಂಠಿ ಬೆಳೆಯಲು ಗುತ್ತಿಗೆ ಪಡೆದಿದ್ದೋ ಅಥವಾ ಅಲ್ಲಿದ್ದ ಬೆಲೆಬಾಳುವ ಮರಗಳನ್ನು ಲಪಟಾಯಿಸಲು ಗುತ್ತಿಗೆ ಪಡೆದಿದ್ದೋ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


ವರ್ಷದ ಕೊನೆ ದಿನ ದಾಖಲೆಯ ಮದ್ಯ ಮಾರಾಟ: ಒಂದೇ ದಿನದಲ್ಲಿ 18.85 ಕೋಟಿ ರೂ. ವಹಿವಾಟು


ಕಾಂಗ್ರೆಸ್ ಕುಟುಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.