ನವದೆಹಲಿ: ಕರ್ನಾಟಕ ರಾಜ್ಯವು ಕಾನೂನು ವ್ಯವಸ್ಥೆ ಹದಗೆಟ್ಟಿರುವಲ್ಲಿ ನಂಬರ್ ಒನ್ ಆಗಿದೆ ಎಂದು ಯಡಿಯೂರಪ್ಪ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟರು.


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯನವರು ನಮ್ಮದು ನಂಬರ್ ಒನ್ ಸರ್ಕಾರ ಎನ್ನುತ್ತಾರೆ, ನಿಜವಾಗಿಯೂ ಕರ್ನಾಟಕ ನಂಬರ್ ಒನ್ ಆಗಿರುವುದು ಕಾನೂನು ವ್ಯವಸ್ಥೆಯ ವೈಫಲ್ಯದಲ್ಲಿ  ಎಂದರು. ಇನ್ನು ಕೇವಲ ಎರಡು ತಿಂಗಳು ಇರುವ ಸರ್ಕಾರವನ್ನು ನಾವು ಸಹಿಸಿಕೊಳ್ಳಬೇಕಾಗಿದೆ. ಮುಂಬರುವ ಚುನಾವಣೆಯಲ್ಲಿ ಜಯಗಳಿಸಿ ನಮ್ಮದೇ ಸರ್ಕಾರವು ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.


ಇನ್ನು ಲಿಂಗಾಯತ್ ವೀರಶೈವ ವಿಷಯದಲ್ಲಿ ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಿರುಗುಬಾಣವಾಗಲಿದೆ ಎಂದರು. ಇದೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಸಭಾ ಟಿಕೆಟ್  ಹಂಚಿಕೆ ಕುರಿತಾಗಿ ಪ್ರಸ್ತಾಪಿಸಿದ ಯಡಿಯೂರಪ್ಪನವರು ಸಮೀಕ್ಷೆಯ ವರದಿಯನ್ನು ಆದರಿಸಿ ಟಿಕೆಟ್ ಹಂಚಲಾಗುವುದು ಎಂದು ತಿಳಿಸಿದರು.