ಬಾಗಲಕೋಟೆ: ದೇಶದೆಲ್ಲೆಡೆ ಈಗ ಕಾಶ್ಮೀರ ಫೈಲ್ಸ್ (The Kashmir Files) ಚಿತ್ರದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಕಾಶ್ಮೀರ ಫೈಲ್ಸ್ ಕುರಿತು ನಡೆಯುತ್ತಿರುವ ಚರ್ಚೆಯಂತೆ ಈಗ ದಲಿತ ಫೈಲ್, ಬಸವಣ್ಣ ಫೈಲ್, ಜೈನ್ ಫೈಲ್ ಗಳ ಕುರಿತಾಗಿ ಸಿನಿಮಾ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ದಲಿತ ಫೈಲ್, ಬಸವಣ್ಣ ಫೈಲ್, ಜೈನ್ ಫೈಲ್ ಕೂಡ ದಾಖಲೀಕರಣವಾಗಬೇಕು, ಇದೇ ರೀತಿ ಇನ್ನೂ ಸಾಕಷ್ಟು ಫೈಲ್ ಗಳಿವೆ, ಅದರಲ್ಲೂ ದಲಿತರಿಗೆ ಸಂಬಂಧಿಸಿದಂತೆ ದಿನನಿತ್ಯ ನಡೆಯುತ್ತಿವೆ.ಅದು ಉತ್ತರ ಪ್ರದೇಶದಿಂದ ಹಿಡಿದು ಕಾಶ್ಮೀರದವರೆಗೆ ಇತಿಹಾಸದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಘಟನೆಗಳು ನಡೆದಿವೆ.


ಇದನ್ನೂ ಓದಿ: The Kashmir Files:ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ಒಬ್ಬನೇ ವೀಕ್ಷಿಸಿದ ಅಭಿಮಾನಿ.!


ಇನ್ನೂ ರಾಜ್ಯದಲ್ಲಿ ಕೋಲಾರದಲ್ಲಿ, ಕಂಬಾಲಪಲ್ಲಿ, ಚಾಮರಾಜನಗರದಂತಹ ಪ್ರದೇಶಗಳಲ್ಲಿ ಅಂತಹ ಘಟನೆಗಳು ಸಂಭವಿಸಿವೆ, ಹಾಗಾಗಿ ಆ ಎಲ್ಲ ಫೈಲ್ ಗಳನ್ನು ಕೂಡ ತೆಗೆಯಬೇಕು ಎನ್ನುವ ಬೇಡಿಕೆ ನಮ್ಮದಾಗಿದೆ.ಈ ಚಿತ್ರಗಳನ್ನು ಮಾಡಲು ನಾನು ಅಂತ ಅಲ್ಲ, ಬೇರೆ ಯಾರಾದ್ರೂ ಇದಕ್ಕೆ ಬಂದೇ ಬರ್ತಾರೆ. ಇದಕ್ಕಾಗಿ ಸಾಕಷ್ಟು ಜನರು ಇದ್ದಾರೆ, ಆದರೆ ಸ್ವಲ್ಪ ಕಾಯಬೇಕು ಎಂದು ಅವರು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.