ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನಲ್ಲಿ ಕೆಲಸ ಮಾಡುತ್ತಿದ್ದ ರೆಹಮಾನ್ ಎಂಬುವ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿದ್ದು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.


COMMERCIAL BREAK
SCROLL TO CONTINUE READING

ಕೊಡಗು ಜಿಲ್ಲೆಯ ಗೋಣಿಕೊಪ್ಪಲು  ಪೊನಂಪೇಟೆ ತಾಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಅಸ್ಸಾಂನಿಂದ ಬಂದಿದ್ದ ವ್ಯಕ್ತಿ ಒಬ್ಬ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಹುಲಿಯಿಂದ ದಾಳಿಗೆ ಒಳಪಟ್ಟ ವ್ಯಕ್ತಿಯು ಮೂಲತಹ ಅಸ್ಸಾಂನವರಾಗಿದ್ದು, ಮಝೀದ್ ರೆಹಮಾನ್ (55) ತಿಳಿದು ಬಂದಿದೆ.


ಇದನ್ನು ಓದಿ : IPL : 53 ಎಸೆತಗಳಲ್ಲಿ 78 ರನ್ ಬಾರಿಸಿದ ಸೂರ್ಯಕುಮಾರ್ : PBKSಗೆ 193ರನ್ ಗಳ ಟಾರ್ಗೆಟ್ ಕೊಟ್ಟ MI


ತೋಟದಲ್ಲಿ ಜಾನುವಾರನ್ನು ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿದೆ. ಮತ್ತು ಹುಲಿ ದಾಳಿಗೆ ಹಸುಗಳು ಹೆದರಿಕೊಂಡು ದೂರ ಓಡಿ ಹೋಗಿವೆ, ಈ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿದ್ದ ರೆಹಮಾನ್ ಅವರ ಮೇಲೆ ಹುಲಿ ಜಿಗಿದು ತೀವ್ರವಾಗಿ ಗಾಯಗೊಳಿಸಿದೆ.  ಈ ಗಾಯಕ್ಕೆ ಒಳಪಟ್ಟ ರೆಹಮಾನ್ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ತಿಳಿಸಿದ್ದಾರೆ. 


ಇದನ್ನು ಓದಿ : Archana Jois : ಜಾಲಿ ಮೂಡ್ ನಲ್ಲಿ ಕ್ಷೇತ್ರಪತಿ ನಾಯಕಿ : ಫೋಟೋಸ್ ಇಲ್ಲಿವೆ 


ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪೋಲಿಸರು ಭೇಟಿ ನೀಡಿದ್ದಾರೆ.  ಜನವರಿಯಿಂದ ಇಲ್ಲಿಯ ತನಕ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ ದಾಳಿಯಿಂದ ಒಟ್ಟು 7 ಜನ ಮೃತ ಪಟ್ಟಿದ್ದು ಅದರಲ್ಲಿ 6 ಮಂದಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ