ಬೆಂಗಳೂರು : ಪಕ್ಷದ ಸೂಚನೆ ಮೀರಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹಿಜಾಬ್ ಗೆ ಕೆಪಿಸಿಸಿ ಶಿಸ್ತು ಸಮಿತಿ ಬಿಗ್ ಶಾಕ್ ನೀಡಿದೆ. ವಿವಾದಾತ್ಮಕ ಹೇಳಿಕೆ ಬಗ್ಗೆ ವಿವರಣೆ ಕೇಳಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ನೋಟೀಸ್ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಅವರು ಹಿಜಾಬ್ ವಿಚಾರದಲ್ಲಿ ಯಾರೂ ಬಹಿರಂಗ ಹೇಳಿಕೆ ಕೊಡದಂತೆ ಕೈ ನಾಯಕರಿಗೆ ಸೂಚಿಸಿದ್ದರು.


ಅಧ್ಯಕ್ಷರ ಸೂಚನೆ ನಡುವೆಯೂ ಜಮೀರ್ ಅಹಮದ್(Zameer Ahmed) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಮೀರ್ ಈ  ಹೇಳಿಕೆಯನ್ನೆ  ಬಿಜೆಪಿ ರಾಜಕೀಯ ಅಸ್ತ್ರವಾಗಿಸಿಕೊಂಡಿದೆ. ಹೀಗಾಗಿ, ಜಮೀರ್ ವರ್ತನೆ ವಿರುದ್ಧ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ. 


ಇದನ್ನೂ ಓದಿ : Congress : ಜಮೀರ್ ಹೇಳಿಕೆಗೆ ಕೈ ಪಾಳೆಯ ಗರಂ; ಸೆಟ್ ಬ್ಯಾಕ್ ಆಗುತ್ತಾ ಹಿಜಾಬ್-ರೇಪ್ ಹೇಳಿಕೆ!


ಈಗ ಸ್ಪಷ್ಟನೆ ಕೇಳಿ‌ ಜಮೀರ್ ಗೆ ಕೆಪಿಸಿಸಿ(KPCC) ಶಿಸ್ತು ಸಮಿತಿ ನೋಟೀಸ್ ಜಾರಿ ಮಾಡಿದೆ. 


ಹಿಜಾಬ್ ವಿವಾದ ವಿಚಾರವಾಗಿ ಕಾಂಗ್ರೆಸ್(Congress) ಎಚ್ಚರಿಕೆ ಹೆಜ್ಜೆ ಇಟ್ಟಿತ್ತು. ಯಾವ ನಾಯಕರಿಗೂ ಬಹಿರಂಗವಾಗಿ ಮಾತನಾಡದಂತೆ ಅಪ್ಪಣೆ ಕೂಡ ಮಾಡಿತ್ತು. ಆದ್ರೆ ಜಮೀರ್ ಅಹ್ಮದ್ ನೀಡಿದ ಹೇಳಿಕೆ ಕೈ ಪಡೆಗೆ ನುಂಗಲಾರದ ತುಪ್ಪ ಆಗಿ ಪರಿಣಮಿಸಿದೆ ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾರ್ನಿಂಗ್ ಜಮೀರ್ ಗೆ ಮಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.