ಬೆಂಗಳೂರು: ಇಂತಹ ಗೊಡ್ಡು ಬೆದರಿಕೆಗೆ ಹೆದರುವ ಮಕ್ಕಳು ಅಲ್ಲ. ನಮ್ಮನ್ನು ಜೈಲಿಗೆ ಹಾಕಿದ್ರು ಪರವಾಗಿಲ್ಲ. ಪಾದಯಾತ್ರೆ (Congress Padayatre) ಮಾಡಿಯೇ ತೀರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಗುಡುಗಿದರು. 


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar), ಯಾರು ಬೇಕಾದರೂ ಅರೆಸ್ಟ್ ಮಾಡಿಕೊಳ್ಳಲಿ. ಕೊವೀಡ್ ರೂಲ್ಸ್ ಗೆ ನಾವು ಗೌರವ ಕೊಡ್ತೇವೆ.  ಕೋವಿಡ್ ಇದೆ. ಇಲ್ಲಿ ಎಲ್ಲರು ಗುಂಪಾಗಿ ಇದ್ದಾರಲ್ಲ. ಹೋಮ್ ಮಿನಿಸ್ಟರ್ ಏನು ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು.


ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ಆಸ್ತಿ, ಅವರು ಚೆನ್ನಾಗಿರಲಿ ಎಂದು ಪಾದಯಾತ್ರೆ ಮಾಡಬೇಡಿ ಎಂದಿದ್ದು: ಸಚಿವ ಈಶ್ವರಪ್ಪ


ಯಾವುದು ಇದು ಆಟ. ಜೈಲಿಗೆ ಹೋಗಲು ನಾನು ಸಿದ್ಧವಿದ್ದೇನೆ. ಪಾದಯಾತ್ರೆಗೆ ಎಲ್ಲರು ಬರುತ್ತಾರೆ. ಅದನ್ನೆಲ್ಲಾ ಅವರ ಊರಲ್ಲಿ ಇಟ್ಟುಕೊಳ್ಳಲಿ. ನಮ್ಮತ್ರ ಎಲ್ಲ ಬೇಡ ಎಂದು ಆಕ್ರೋಶ ಹೊರಹಾಕಿದರು.


ಹೋಮ್ ಮಿನಿಸ್ಟರ್, ಆರೋಗ್ಯ ಸಚಿವರು ಎಲ್ಲಾ ಏನು ಮಾಡ್ತಿದ್ದಾರೆ? ನಾವು 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬರ್ತಿದ್ದೇವೆ. ಇದನ್ನು ನಿಲ್ಲಿಸೋಕೆ ಗೃಹ ಸಚಿವರು ಇನ್ನೊಂದು ಜನ್ಮ ಹುಟ್ಟಿ ಬರಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.