ಬೆಂಗಳೂರು : ಪಾವಗಡ ಬಸ್ ದುರಂತ ಮಾಸುವ ಮುನ್ನವೇ  ಬೆಂಗಳೂರಿನಲ್ಲಿ ಮತ್ತೊಂದು ಬಸ್ ಅಪಘಾತ ಸಂಭವಿಸಿದೆ.  ಕೆಂಗೇರಿ ಬಳಿ ಮೆಟ್ರೋ ಪಿಲ್ಲರ್ ಗೆ ಕೆಎಸ್ ಆರ್ ಟಿಸಿ ಡಿಕ್ಕಿ ಹೊಡೆಡಿದೆ.  ಘಟನೆಯಲ್ಲಿ  25 ಜನರ ತಲೆಗೆ ತೀವ್ರ ಗಾಯಗಳಾಗಿದ್ದು,  4 ಜನರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಬೆಂಗಳೂರಿನ ಕೆಂಗೇರಿ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತಕ್ಕೆ ಒಳಗಾಗಿದೆ. ಕೆಂಗೇರಿ ಬಳಿ ಮೆಟ್ರೋ ಪಿಲ್ಲರ್ ಗೆ ಬಸ್ ಡಿಕ್ಕಿ ಹೊಡೆದಿದೆ.  ಪೂರ್ಣಿಮಾ ಪ್ಯಾಲೇಸ್ ಬಳಿ ಇರುವ ಮೆಟ್ರೋ ಪಿಲ್ಲರ್ ನಂ 545ಗೆ ಬಸ್  ಡಿಕ್ಕಿ ಹೊಡೆದಿದೆ.  ಈ ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು. 


ಇದನ್ನೂ ಓದಿ :  ‌ ಗ್ರಾಹಕರೇ ಗಮನಿಸಿ... ಇಲ್ಲಿದೆ ಇಂದಿನ ತರಕಾರಿ ಬೆಲೆ


ಮಡಿಕೇರಿಯಿಂದ ಬೆಂಗಳೂರಿಗೆ  ಬರುತ್ತಿದ್ದ ಈ ಬಸ್ ನಲ್ಲಿ 45 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ, 25 ಜನರ ತಲೆಗೆ ತೀವ್ರ ಗಾಯಗಳಾಗಿವೆ.  4 ಜನರ ಪರಿಸ್ಥಿತಿ ಗಂಭೀರವಾಗಿದೆ.  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 
ಇದನ್ನೂ ಓದಿ : ಗುಳೇದಗುಡ್ಡ ಶೂಟ್ ಔಟ್ ಪ್ರಕರಣ : ರಕ್ತಸ್ರಾವದಿಂದ ಮಹಿಳೆ ಸಾವು


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.