ಕೊಪ್ಪಳ: ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ನೆಗೆದು ಬಿಳ್ತಾರೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಚುನಾವಣೆ ಬಳಿಕ ಕುಮಾರಸ್ವಾಮಿ‌ ನೆಗೆದುಬೀಳ್ತಾರೆ. ಸರ್ಕಾರ ಬಿದ್ದು ಹೋಗತ್ತೆ ಎಂದು ಹೇಳಿಕೆ ನೀಡಿ ನಾಲಿಗೆ ಹರಿಯಬಿಟ್ಟಿದ್ದಾರೆ. 


ಮುಂದುವರೆದು ಮಾತನಾಡುತ್ತಾ, ಜೆಡಿಎಸ್‌ ಇದುವರೆಗೂ ಕಾರ್ಯಕರ್ತರನ್ನು ಬೆಳೆಸಿಲ್ಲ. ಕೇವಲ ಗೌಡರ ಕುಟುಂಬ ಅಭಿವೃದ್ಧಿಯಾಗುತ್ತಿದೆ.  ಕುಮಾರಸ್ವಾಮಿ ಮಂಡ್ಯದ ಮುಖ್ಯಮಂತ್ರಿ, ರೇವಣ್ಣ ಹಾಸನ ಲೋಕೊಪಯೋಗಿ ಸಚಿವ, ದೇವೇಗೌಡ ತುಮಕೂರಿನ ಮಾಜಿ ಪ್ರಧಾನ‌ಮಂತ್ರಿ. ಇದು ನಮ್ಮ ರಾಜ್ಯದ ಪರಿಸ್ಥಿತಿ ಎಂದು ವ್ಯಂಗ್ಯ ಮಾಡಿದ ಈಶ್ವರಪ್ಪ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.