ಚಿಕ್ಕೋಡಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವೆಂದು ಹೆಸರುವಾಸಿಯಾದ ಮೊಹರಂ ಹಬ್ಬದಲ್ಲಿಯೂ ಕರುನಾಡ ಯುವರತ್ನ ದಿ. ಪುನೀತ್ ರಾಜಕುಮಾರ್ ಅವರ ಫೋಟೋ ರಾರಾಜಿಸುತ್ತಿದೆ. ಮೊಹರಂ ಹಬ್ಬದಲ್ಲಿ ಶಿವನ ಪಾತ್ರಧಾರಿ ಕೈಯಲ್ಲಿ ಮಂಗಳ ವಾದ್ಯಗಳ ಜೊತೆಗೆ ಅಪ್ಪು ಫೋಟೋ ಹಿಡಿದಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Crazy Star: ‘ರವಿ ಬೋಪಣ್ಣ’ನಾಗಿ ಕಮಾಲ್ ಮಾಡಲು ಸಜ್ಜಾದ ಕ್ರೇಜಿ ಸ್ಟಾರ್ ರವಿಚಂದ್ರನ್!


ಪುಟ್ಟ ಮಕ್ಕಳು ಕೂಡಾ ಇಷ್ಟ ಪಡುತ್ತಿದ್ದ ನಟ ನಮ್ಮೆಲ್ಲರ ಪ್ರೀತಿಯ ಅಪ್ಪು ಅಗಲಿ ಒಂದು ವರ್ಷವಾಗುತ್ತಾ ಬಂದರೂ, ಪುನೀತ್ ರಾಜ್​​ಕುಮಾರ್ ಅವರನ್ನು ಅಭಿಮಾನಿಗಳು ನೆನೆಯದ ದಿನಗಳೇ ಇಲ್ಲ. ಅವರು ಮರೆಯಾದ ದಿನದಿಂದು ಹಿಡಿದು ಇಂದಿನವರೆಗೂ ಅಭಿಮಾನಿಗಳು ಅವರನ್ನು ಒಂದಲ್ಲಾ ಒಂದು ವಿಧದಲ್ಲಿ ಆರಾಧಿಸುತ್ತಾರೆ.


ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಹಿಂದೂ ಮುಸ್ಲಿಂ ಎಂದು ಬೇಧ ಭಾವ ಮಾಡದೆ ಶಿವ ಪಾರ್ವತಿ, ರಾಮ ಸೀತಾ, ಲಕ್ಷ್ಮಣ, ಹಣಮಂತ, ರಾಕ್ಷಸ ಸೇರಿದಂತೆ ಅನೇಕ ವಿಧಧ ವೇಷ ಧರಿಸಿ ನೃತ್ಯ ಮಾಡುತ್ತಿರುವ ವೇಳೆ ಶಿವನ ಪಾತ್ರದಾರಿ ಯುವಕನೋರ್ವ ಅಪ್ಪು ಫೋಟೋ ಹಿಡಿದು ಹೆಜ್ಜೆ ಹಾಕಿ ನೆರೆದ ಜನರಲ್ಲಿ ದಿ. ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿದ್ದು ಮಾತ್ರ ಸುಳ್ಳಲ್ಲ. ಅನಂತರ ಎಲ್ಲ ಯುವಕರು ಹಾಗೂ ಗ್ರಾಮಸ್ಥರು ಸೇರಿ ಪುನೀತ್ ಅವರ ಫೋಟೋ ಹಿಡಿದು ಮೆರವಣಿಗೆ ಮಾಡಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. 


ಇದನ್ನೂ ಓದಿ: ತೆರೆ ಮೇಲೆ ಬರಲು ‘ರವಿ ಬೋಪಣ್ಣ’ ರೆಡಿ: ಆಗಸ್ಟ್ 12 ರಂದು ಕಮಾಲ್ ಮಾಡಲಿದೆ ‘ಕ್ರೇಜಿ’ ಸಿನಿಮಾ


ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಈಗಲೂ ಕೂಡಾ ಅಪ್ಪು ಫೋಟೋಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಅವರ ಸಿನಿಮಾಗಳನ್ನು ನೋಡಿದಾಗ, ಅವರ ಹಾಡುಗಳನ್ನು ಕೇಳಿದಾಗ ದು:ಖ ಉಮ್ಮಳಿಸಿ ಬರುತ್ತದೆ. ಅಪ್ಪು ಯಾವ ರೂಪದಲ್ಲಾದರೂ ಮತ್ತೆ ವಾಪಸ್ ಬನ್ನಿ ಎಂದು ಪುಟ್ಟ ಮಕ್ಕಳಂತೆ ಅಭಿಮಾನಿಗಳು ಅವರನ್ನು ನೆನೆಯುತ್ತಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.