Lokshabha Elections 2024: ವಿಧಾನಸಭಾ ಚುನಾವಣೆ ವೇಳೆ ನನ್ನ ಜೊತೆ ಸಿದ್ದರಾಮಯ್ಯ ಅವರು ಒಪ್ಪಂದ ಮಾಡಿಕೊಂಡಿದ್ದರು ಎಂದು ಗಂಗಾವತಿ ಶಾಸಕ ಜನಾರ್ದನ್‌ ರೆಡ್ಡಿ ಬಾಂಬ್‌ ಸಿಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ಜೊತೆ ಸಿದ್ದರಾಮಯ್ಯ ಅಡ್ಜೆಸ್ಟ್​ಮೆಂಟ್​ ಮಾಡಿಕೊಂಡಿದ್ರು. ಈ ಕಾರಣಕ್ಕಾಗಿಯೇ ಅವರು ಗಂಗಾವತಿ ಹಾಗೂ ಬಳ್ಳಾರಿಯಲ್ಲಿ ಪ್ರಚಾರಕ್ಕೆ ಬರಲಿಲ್ಲವೆಂದು ಹೇಳಿದ್ದಾರೆ. 


ಇದನ್ನೂ ಓದಿ: ಲವರ್‌ ಬೆಸ್ಟ್‌ ಬಾಯ್‌ ಫ್ರೇಂಡ್‌ ಮೇಲೆ ದಾಳಿ..! ಲಾಂಗ್‌ ಬೀಸಿ ಕೈ ಕಟ್‌ ಮಾಡಿದ ಪಾಗಲ್‌ ಪ್ರೇಮಿ


ವಿಧಾನಸಭಾ ಚುನಾವಣೆಯಲ್ಲಿ KRPP ಪಕ್ಷ ಹತ್ತು ಸ್ಥಾನ ಗೆಲ್ಲಬಹುದು ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರು ಅಂದಾಜಿಸಿದ್ದರು. ಕಡಿಮೆ ಸ್ಥಾನಗಳು ಬಂದರೆ ನಾವು ಸರ್ಕಾರ ರಚಿಸಲು ಆತನ ಬೆಂಬಲ ಪಡೆಯಬಹುದು ಅಂತಾ ಅಂದುಕೊಂಡಿದ್ದರು. ಹೀಗಾಗಿಯೇ ಅವರು ನನ್ನ ಜೊತೆಗೆ ಒಂದು ಸಂಧಾನ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.  


ನಮ್ಮಿಬ್ಬರಿಗೂ ಕಾಮನ್‌ ಫ್ರೆಂಡ್‌ ಒಬ್ಬರನ್ನು ಮಾತುಕತೆಗೆ ಕಳುಹಿಸಲಾಗಿತ್ತು.. ಈ ವೇಳೆ ಹಳೆಯದನ್ನೆಲ್ಲಾ ಮರೆತುಬಿಡೋಣ, ನಾನು ಗಂಗಾವತಿ ಹಾಗೂ ಬಳ್ಳಾರಿಯಲ್ಲಿ ಪ್ರಚಾರ ಮಾಡುವುದಿಲ್ಲ. ರೆಡ್ಡಿ ಬಗ್ಗೆ ನಾನು ಎಲ್ಲಿಯೂ ಮಾತನಾಡಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರು.. ಅದರಂತೆ ನಡೆದುಕೊಂಡಿದ್ದರು.


ಇದನ್ನೂ ಓದಿ: ಚಿತ್ರನಟ ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ: ಬಸವರಾಜ ಬೊಮ್ಮಾಯಿ


ಹೀಗಾಗಿ ಸಿದ್ದರಾಮಯ್ಯ ಗಂಗಾವತಿ ಹಾಗೂ ಬಳ್ಳಾರಿಯಲ್ಲಿ ಪ್ರಚಾರಕ್ಕೆ ಬರಲಿಲ್ಲ, ಚುನಾವಣೆ ವೇಳೆ ಎಲ್ಲಿಯೂ ನನ್ನ ಬಗ್ಗೆ ಮಾತನಾಡಲೇ ಇಲ್ಲ. ನನ್ನ ಮೇಲೆ ಆಣೆ ಮಾಡಿ ಹೇಳುತ್ತೇನೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ನನ್ನ ಜೊತೆಗೆ ಅಡ್ಜೆಸ್ಟ್​ಮೆಂಟ್‌ ಮಾಡಿಕೊಂಡಿದ್ದರು ಅಂತಾ ಜನಾರ್ದನ್‌ ರೆಡ್ಡಿ ಹೇಳಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.