ಕೊಪ್ಪಳ : ಇತ್ತೀಚಿನ ದಿನಗಳಲ್ಲಿ ಲಿಂಗಾನುಪಾತದಲ್ಲಿ ಬಹಳಷ್ಟು ಏರುಪೇರು ಕಂಡು ಬರುತ್ತಿದೆ. ಇನ್ನು ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರಿ ನೌಕ ರರು, ಇಂಜಿನಿಯರ್ ಸೇರಿದಂತೆ ಶ್ರೀಮಂತ ವರಗಳನ್ನೆ ಹುಡುಕುತ್ತಿದ್ದಾರೆ. ಇದರಿಂದ ಬಹಳಷ್ಟು ಯುವಕರಿಗೆ ವಧು ಸಿಗದೇ‌ ಪರಿತಪಿಸುವಂತಾಗಿದೆ.ಈ ಹಿನ್ನೆಲೆಯಲ್ಲಿ ಇಲ್ಲೊಬ್ಬ ಯುವಕ ಜಿಲ್ಲಾಧಿಕಾರಿಗಳ ಜನಸಂಪರ್ಕ ಸಭೆಯಲ್ಲಿ ನನಗೆ ಕನ್ಯೆ ಕೊಡಿಸಿ ಎಂದು ಲಿಖಿತ ಪತ್ರ ಕೊಡುವ ಮೂಲಕ ಡಿಸಿಗೆ ತಲೆನೋವು ತರಿಸಿದ್ದಾನೆ.


COMMERCIAL BREAK
SCROLL TO CONTINUE READING

ತನಗೆ ಕನ್ಯೆ ಕೊಡಿಸಿ, ನನ್ನ ಬಾಳಿಗೆ ಬೆಳಕು ಕೊಡಿ ಎಂದು ಯುವಕನೊಬ್ಬ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾನೆ.ಈತನ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ  ಇದು ಯಾವ ಇಲಾಖೆಯ ಅಡಿಯಲ್ಲಿ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ. 


ಇದನ್ನೂ ಓದಿ : ನಾಡಪ್ರಭು ಕೆಂಪೇಗೌಡರು ಕನ್ನಡದ ಸ್ವತ್ತು, ಕನ್ನಡಿಗರ ಅಸ್ಮಿತೆ-ಹೆಚ್.ಡಿ.ಕುಮಾರಸ್ವಾಮಿ


ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.  ಕನಕಗಿರಿ ಪಟ್ಟಣದ ನಿವಾಸಿ ಸಂಗಪ್ಪ ಎಂಬಾತ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್ ಅವರಿಗೆ ಅರ್ಜಿ ನೀಡಿ,‘ನಾನು ಕೃಷಿಕ ಕುಟುಂಬಕ್ಕೆ ಸೇರಿದ್ದೇನೆ.ಕಳೆದ ಹತ್ತು ವರ್ಷಗಳಿಂದ ಮದುವೆಗೆ ಹೆಣ್ಣು ಹುಡುಕುತ್ತಿದ್ದೇನೆ.ಆದರೆ ಇಲ್ಲಿವರೆಗೆ  ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಮುಂದೆ ಬಂದಿಲ್ಲ. ಇದರಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ.ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.


ಯುವಕನ ಮನವಿ ಕೇಳಿ ಶಾಕ್ ಆದ ಜಿಲ್ಲಾಧಿಕಾರಿ, ಕನ್ಯೆ ಸಮಸ್ಯೆ ಯಾವ ಇಲಾಖೆಯಡಿ ಬರುತ್ತೆ ಅಂತಾ ತಮ್ಮ ಅಧಿಕಾರಿಗಳನ್ನು ಕೇಳಿ
ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. 


ಇದನ್ನೂ ಓದಿ : ಮಾದಕ ವ್ಯಸನ ಆಧುನಿಕ ಪಿಡುಗು: ಗೃಹ ಸಚಿವ ಪರಮೇಶ್ವರ್


ಒಟ್ಟಿನಲ್ಲಿ ಸಂಗಪ್ಪನ ಈಗ ಕನ್ಯೆ ಸಿಗದೇ ಇರುವ ಯುವಕರಿಗೆ ಹಿರೋ ಆದರೆ,  ಇತ್ತ ನಾವೇಲ್ಲಿ ಕನ್ಯೆ ಹುಡುಕಿಕೊಡೋಣ ಅಂತಾ ಅಧಿಕಾರಿಗಳು ತಲೆ ತಲೆ ಜಜ್ಜಿಕೊಳ್ತಿದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.