ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು, ನಟರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಜನರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಹೆಚ್ಚಾದಂತೆ ಸೆಲ್ಫಿ ತೆಗೆದುಕೊಳ್ಳುವವರ ವಿರುದ್ಧ ವಿರೋಧ ವ್ಯಕ್ತಪಡಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದೇ ರೀತಿ ಭಾನುವಾರ ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೊಪಗೊಂಡು, ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಿದ್ದ ಯುವಕನ ಕೈಯಿಂದ ಮೊಬೈಲ್ ಕಿತ್ತು ಬಿಸಾಡಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರ ಬಳ್ಳಾರಿಯಲ್ಲಿ ಆಯೋಜನೆಗೊಂದಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ಸಚಿವ ಡಿ.ಕೆ. ಶಿವಕುಮಾರ್, ಅವರನ್ನು ಕಂಡೊಡನೆ ನೂರಾರು ಕಾರ್ಯಕರ್ತರು ಶಿವಕುಮಾರ್ ಬಳಿ ಮುಗಿಬಿದ್ದರು. ಈ ನೂಕುನುಗ್ಗಲಿನ ನಡುವೆ ಓರ್ವ ಯುವಕ ಶಿವಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆಯೇ ಆತನ ಕೈಗೆ ಹೊಡೆದು, ಸೆಲ್ಫಿ ತೆಗೆಯುವುದನ್ನು ನಿರಾಕರಿಸಿದರು. ಈ ವಿಡಿಯೋ ವೈರಲ್ ಆಗಿದೆ. 


ಈ ದೃಶ್ಯವನ್ನು ANI ಸೆರೆಹಿಡಿದಿದೆ.