ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ ಓರ್ವ ಬಚ್ಚಾ, ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವನು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಯೋಗೀಶ್ವರ್, ಹೌದು. ನಾನು ಬಚ್ಚಾ. ರಾಜಕೀಯವಾಗಿ ನಾನು ಬಚ್ಚಾನೇ. ರಾಮನಗರಕ್ಕೆ ಬಂದಾಗ ಕುಮಾರಸ್ವಾಮಿ ಕೂಡ ಬಚ್ಚಾ ಆಗಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯೋಗೇಶ್ವರ್(CP Yogeshwar), ನನಗೆ ನನ್ನ ಪಾರ್ಟಿಯ ಸಿದ್ಧಾಂತ ಎಂಬುದಿದೆ. ಆದರೆ ಕುಮಾರಸ್ವಾಮಿಗೆ ಹಾಗಲ್ಲ. ಅವರಿಗೆ ಯಾವುದೇ ಸಿದ್ಧಾಂತಗಳಿಲ್ಲ. ಯಾವ ಪಾರ್ಟಿಗೆ ಬೇಕಾದರೂ ಅಡ್ಜಸ್ಟ್ ಆಗ್ತಾರೆ. ಹಾಗಾಗಿ ಅವರೊಬ್ಬ ಜೋಕರ್ ತರಹ ಎಂದು ಹೇಳಿದ್ದಾಗಿ ಸ್ಪಷ್ಟನೆ ನೀಡಿದರು.


ಖಾಕಿ, ಸಿಸಿಟಿವಿ ಕಣ್ಗಾವಲಿನ ನಡುವೆ ನಾಳೆ FDA Exam.! ಅತೀ ಅಗತ್ಯ ಮಾಹಿತಿ ಇಲ್ಲಿದೆ.


ಹೆಚ್.ಡಿ.ಕೆ.(HD Kumaraswamy) ಏನು ಎಂಬುದನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಅದಕ್ಕಾಗಿ ಅವರ ಬಗ್ಗೆ ನನಗೆ ಗೊತ್ತಾಗಿದೆ. ಅಧಿಕಾರ ಇದ್ದಾಗ ಅವರೊಬ್ಬ ಸ್ವಾರ್ಥ ರಾಜಕಾರಣಿ. ಮತದಾರರನ್ನು ಜೀತದಾಳುಗಳಂತೆ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.


Vidhana Parishath ಸಚಿವಾಲಯದ ನೌಕರರಿಗೆ ವಸ್ತ್ರ ಸಂಹಿತೆ ಜಾರಿ


ಇದೇ ವೇಳೆ ಇಸ್ಪೀಟ್(Ispit Card) ಹಣದಲ್ಲಿ, ಜೂಜಾಟದ ಹಣದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂಬ ಹೆಚ್. ಡಿ. ಕೆ. ಹೇಳಿಕೆಗೆ ಕಿಡಿಕಾರಿದ ಯೋಗೀಶ್ವರ್, ಕುಮಾರಸ್ವಾಮಿ ಕೂಡ ಇಸ್ಪೀಟ್ ಆಡುತ್ತಾರೆ. ಕುಮಾರಸ್ವಾಮಿ ಇಲ್ಲಲ್ಲ ಸಿಂಗಾಪುರ, ಮಲೇಶಿಯಾದಲ್ಲಿ ಇಸ್ಪೀಟ್ ಆಡೋ ಫೋಟೋಗಳು ನನ್ನ ಹತ್ರ ಇದೆ. ಅವಶ್ಯಕತೆ ಬಂದಾಗ ಆ ಫೋಟೋ ಬಿಡುಗಡೆ ಮಾಡ್ತೇನೆ ಎಂದು ಹೇಳಿದ್ದಾರೆ.


Purchase New Vehicles: ರಾಜ್ಯ ಸರ್ಕಾರದಿಂದ 32 ಸಚಿವರು, 28 ಸಂಸದರಿಗೆ ಭರ್ಜರಿ‌ ಗಿಫ್ಟ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.