ಶಿರಸಿ: ಒಂದು ಕಡೆ ಕಾಗೆ, ಕೋತಿ, ನರಿಗಳು ಒಂದಾಗಿವೆ, ಇನ್ನೊಂದೆಡೆ ನಮ್ಮೊಂದಿಗೆ 'ಹುಲಿ' ಇದೆ. ಹಾಗಾಗಿ 2019ರ ಚುನಾವಣೆಯಲ್ಲಿ ಆಲೋಚಿಸಿ ಹುಲಿಯನ್ನು ಆರಿಸಿ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳನ್ನು ಪ್ರಾಣಿ-ಪಕ್ಷಿಗಳಿಗೆ ಹೋಲಿಸುವ ಮೂಲಕ ಮತ್ತೊಮ್ಮೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಅಲ್ಲದೆ, "ನೀವೆಲ್ಲ ಈಗ ಪ್ಲಾಸ್ಟಿಕ್ ಖುರ್ಚಿಯಲ್ಲಿ ಕುಳಿತಿದ್ದೀರಾ. ಅಲ್ಲವೇ? ಅದಕ್ಕೆ ಕಾರಣ 70 ವರ್ಷಗಳ ಕಾಂಗ್ರೆಸ್ ಆಡಳಿತ. 70 ವರ್ಷಗಳಿಂದ ನಾವು ಆಡಳಿತ ನಡೆಸಿದ್ದರೆ ನೀವೀಗ ಬೆಳ್ಳಿ ಕುರ್ಚಿಯ ಮೇಲೆ ಕುಳಿತಿರುತ್ತಿದ್ದಿರಿ' ಎಂದು ಹೇಳುವ ಮೂಲಕ ಕಾಂಗ್ರೆಸ್ ಆಡಳಿತವನ್ನು ಹೀಗಳೆದಿದ್ದಾರೆ. 


ಈ ಹಿಂದೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಅನಾತ್ ಕುಮಾರ್ ಹೆಗಡೆ, ಕಾಂಗ್ರೆಸ್ ಒಂದು ನಾಟಕದ ಕಂಪನಿ, 'ರಾಹುಲ್ ಗಾಂಧಿ ಒಬ್ಬ ಕೋಟಾ ಹಿಂದುತ್ವವಾದಿ... ಮೊದಲಾದ ಹೇಳಿಕೆಗಳನ್ನೂ ನೀಡಿ ವಿವಾದ ಹುಟ್ಟಿಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.