ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿರುವ ಬಿಡಿಸಿಸಿ ಬ್ಯಾಂಕ್ ನಲ್ಲಾಗಿರುವ 4 ಕೋಟಿ.ರೂ ಕಳ್ಳತನ ಪ್ರಕರಣ ಈಗ ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ.


COMMERCIAL BREAK
SCROLL TO CONTINUE READING

ಹೌದು, ಈಗ ಬ್ಯಾಂಕ್ (Bank) ನಲ್ಲಿ ಯಾವುದೇ ಕೀ ಗಳನ್ನು ಒಡೆಯದೆ ಕಳ್ಳತನ ಮಾಡಿರುವುದು ಈಗ ಹಲವು ಸಂಶಯಗಳಿಗೆ ಕಾರಣವಾಗಿದೆ.ಆದರೆ ಅಚ್ಚರಿ ಎಂದರೆ ಬ್ಯಾಂಕಿನಲ್ಲಿ ಕ್ಯಾಮರಾ ಡಿವೈಸ್ ಗಳನ್ನು ಕಳ್ಳತನ ಮಾಡಲಾಗಿದೆ. ಮುರಗೋಡದಲ್ಲಿರುವ ಬಿಡಿಸಿಸಿ ಬ್ಯಾಂಕಿನಲ್ಲಿ 50 ಲಕ್ಷಗಳ ಹಣದ ಮೀಟಿಯನ್ನು ಇರಿಸಲಾಗಿತ್ತು, ಕೇವಲ ಅಷ್ಟೇ ಹಣಕ್ಕೆ ವಿಮೆಯನ್ನು ಮಾಡಿಸಲಾಗಿತ್ತು ಎಂದು ತಿಳಿದುಬಂದಿದೆ.


ಇದನ್ನೂ ಓದಿ: Govind Karjol : 'ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಬೆಳಗಾವಿಯ ಇಬ್ಬರು, ವಿಜಯಪುರ ಓರ್ವ ವಿದ್ಯಾರ್ಥಿ'


ಈಗ ಏಕಾಏಕಿ ಬ್ಯಾಂಕಿನಲ್ಲಿದ್ದ  4 ಕೋಟಿ ರೂ.ಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೋಚಲಾಗಿದೆ ಎಂದು ತಿಳಿದು ಬಂದಿದೆ.ಈಗ ಈ ಕುರಿತಾಗಿ ಅಧಿಕಾರಿಗಳು ಕಳ್ಳತನದ ಪ್ರಕರಣದ ಕುರಿತಾಗಿ ಪರಿಶೀಲನೆ ನಡೆಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.