ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಸೋಮವಾರ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದಾರೆ. ಉದ್ಘಾಟನೆ ಬೆನ್ನಲ್ಲೇ ಮೈಸೂರು ದಸರಾ ಮಂಕಾಗಿ ಹೋಗಿದೆ. ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಕಾರಣ ಸರಳವಾಗಿ ದಸರಾ ಹಬ್ಬ ನಡೆದಿತ್ತು. ಈ ವರ್ಷ ಎಂದಿನಂತೆ ಅದ್ದೂರಿ ದಸರಾ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಈ ಬಾರಿ ದಸರಾ ಕಳೆಗುಂದಿದಂತಾಗಿದೆ.


COMMERCIAL BREAK
SCROLL TO CONTINUE READING

ನಾಡಹಬ್ಬ ದಸರೆಯಲ್ಲಿ ಏನೇನೂ ಇಲ್ಲದಂಗಾಗಿದೆ. ಅದ್ದೂರಿಯಾಗಿ ನಡೆಯಬೇಕಿದ್ದ ದಸರಾ ಮಹೋತ್ಸವ ಅದ್ವಾನ-ಅವ್ಯವಸ್ಥೆಗಳ ಬೀಡಾಗಿದೆ. ಉದ್ಘಾಟನೆ ಬೆನ್ನಲ್ಲೇ ಮೈಸೂರು ದಸರಾ ಮಂಕಾಗಿಹೋಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಮಂತ್ರಿ, ಮಹೋದಯರು ಕಣ್ಮರೆಯಾಗಿದ್ದಾರೆ.


ಇದನ್ನೂ ಓದಿ: Mysuru Dasara Festival: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ ಮೈಸೂರು


ಯುವ ದಸರಾ ಕೂಡ ದಿಢೀರ್ ಮುಂದೂಡಿಕೆಯಾಗಿದೆ. ಕಾರ್ಯಕ್ರಮಕ್ಕೆ ಚಿತ್ರ ನಟರನ್ನು ಕರೆತರುವಲ್ಲಿ ದಸರಾ ಆಯೋಜಕರು ವಿಫಲರಾಗಿದ್ದಾರೆ. ಗಣ್ಯರ ಗೈರು ಹಿನ್ನೆಲೆ ಯುವ ದಸರಾ 1 ದಿನ ಮುಂದೂಡಿಕೆಯಾಗಿದೆ. ನಟ ಕಿಚ್ಚ ಸುದೀಪ್ ಬಳಿಕ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಗೈರಾಗಿದ್ದಾರೆ.


ನಾಡಹಬ್ಬ ಮೈಸೂರು ದಸರಾ: ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ KSRTC


ಇದರ ಜೊತೆಗೆ ಹೆಲಿಕಾಪ್ಟರ್ ರೈಡ್, ಏರ್ ಶೋ, ಜಲಕ್ರೀಡೆ, ಪುಸ್ತಕ ಮೇಳ ಮತ್ತು ಚಿತ್ರ ಸಂತೆ ಸೇರಿ ಹಲವು ಕಾರ್ಯಕ್ರಮಗಳನ್ನ ರಾಜ್ಯ ಸರ್ಕಾರ ಕೈಬಿಟ್ಟಿದೆ. ಇದರಿಂದ ಅರಮನೆ ನಗರಿ ಮೈಸೂರು ಬಣಗುಡುತ್ತಿದೆ. ಮೈಸೂರು ದಸರಾಗೆ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಲ್ಲ. ಪರಿಣಾಮ ಹೋಟೆಲ್ ಉದ್ಯಮ ಸೇರಿ ಪ್ರವಾಸೋದ್ಯಮಕ್ಕೂ ಮಂಕು ಕವಿದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.