ಬೆಂಗಳೂರು : ನಮ್ಮ‌ ಮೆಟ್ರೋ ಇಂದು ಅನ್ನದಾತನಿಗೆ ಅವಮಾನಿಸಿದೆ. ಬಟ್ಟೆ ಕೊಳಕು ಅನ್ನೋ ಒಂದೇ ಉದ್ದೇಶಕ್ಕೆ ರೈತರೊಬ್ಬರನ್ನ ಮೆಟ್ರೋ ಹತ್ತಲು ಬಿಡದೆ ಕಡೆಗಣಿಸಿಲಾಗಿದೆ. ನಮ್ಮ‌ ಮೆಟ್ರೋ ಅಂದ್ರೆ ಕರ್ನಾಟಕದ ಹಿರಿಮೆಗೆ ಸಾಕ್ಷಿ ಆಗಿದೆ.‌ಬೆಂಗಳೂರು ಅಭಿವೃದ್ಧಿ ಆಗ್ತಿದ್ದಂಗೆ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಸಾರಿಗೆ ಸೇವೆಯನ್ನ ಕಲ್ಪಿಸುತ್ತಿದೆ.ಗ್ರೀನ್ ಲೈನ್, ಪರ್ಪಲ್ ಲೈನ್ ನಲ್ಲಿ ನಿತ್ಯ ಎಂಟತ್ತು ಲಕ್ಷ ಪ್ರಯಾಣಿಕರು ಸಂಚಾರ ಮಾಡೋ ಮೂಲಕ ಸೈ ಎನಿಸಿಕೊಂಡಿದೆ. ಹೀಗಾಗಿ ಇನ್ನಷ್ಟು ಮಾರ್ಗಗಳತ್ತ ಕಾಮಗಾರಿ ಅಂತ್ಯಗೊಳಿಸುತ್ತಾ ಬರ್ತಿದೆ. 


COMMERCIAL BREAK
SCROLL TO CONTINUE READING

ಆದರೆ ಇಂತಹ ಸಾರಿಗೆ ಸಂಚಾರ ಇನ್ನೆಲ್ಲೂ ಇಲ್ಲವೇ ಇಲ್ಲ ಅನ್ನೋ ಅಹಂ ನಮ್ಮ ಮೆಟ್ರೋಗೆ ಸಿಬ್ಬಂದಿಗಳಿಗೆ ಬಂದಹಾಗೆ ಕಾಣ್ತಿದೆ. ಅದಕ್ಕೆ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿರುವ ಘಟನೆ ಸಾಕ್ಷಿ. ನಿಜ, ಮೆಟ್ರೋ ಗೆ ಬರುತ್ತಿರುವ ಪ್ರಶಂಸೆಗಳ ಸಾಲು, ಮೆಟ್ರೋ ಅಧಿಕಾರಿ ಸಿಬ್ಬಂದಿಗಳ ದುರ್ವರ್ತನೆಗೆ ಕಾರಣವಾಗುತ್ತಿದೆ. ಕೇವಲ ವಿವಿಐಪಿ, ವಿಐಪಿ ಪ್ರಯಾಣಕರಿಗೆ ಮಾತ್ರ ಮೆಟ್ರೋ ಇರೋದು ಅನ್ನೋ ಅಹಂ ನೆತ್ತಿಮೇಲೆ ಕುಳಿತಂತಿದೆ.   ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಮಣ್ಣಾದ ಬಟ್ಟೆ, ತಲೆ ಮೇಲೆ ಗಂಟೂ ಮೂಟೆ ಕಟ್ಟಿಬಂದ ಅನ್ನದಾತನ ಬಳಿ ನಡೆದುಕೊಂಡಿರುವ ವರ್ತನೆಯೇ ಇದಕ್ಕೆ ಸಾಕ್ಷಿ. 


ಇದನ್ನೂ ಓದಿ : ಗೃಹ ಸಚಿವರ ಮನೆಯ ಫ್ರಿಡ್ಜ್ ಬಾಗಿಲು ತೆಗೆದು ಹಾಲು ಕುಡಿದ ಕೋತಿ..!


ಕಳೆದ ಕೆಲ ದಿನಗಳ ಹಿಂದೆ ಮೆಟ್ರೋದಲ್ಲಿ ಪ್ರಯಾಣಿಸಲು ಬಂದಿದ್ದ ಬಡ ರೈತ. ಮೆಟ್ರೋ ನಿಲ್ದಾಣದೊಳಗೆ ಪ್ರವೇಶಿಸಲು ಮುಂದಾಗಿದ್ದಾನೆ. ಈ ವೇಳೆ ಸಿಬ್ಬಂದಿ ರೈತನೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಾರೆ. ಮೈಮೇಲೆ ಹಳೆಬಟ್ಟೆ ಕೊಳೆಯಾಗಿದೆ. ಮೆಟ್ರೋದಲ್ಲಿ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತೆ ಎಂಬ ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ರೈತನನ್ನ ಹೊರಕ್ಕೆ ಕಳಿಸಿದ್ದಾರೆ. 


ರೈತನನ್ನ ಹೊರಕಳಿಸುತ್ತಿದ್ದಂತೆ ಆಕ್ರೋಶಗೊಂಡ ಸಹ ಪ್ರಯಾಣಿಕರು. ಟಿಪ್‌ಟಾಪ್ ಆಗಿ ಡ್ರೆಸ್ ಮಾಡಿಕೊಂಡರೆ ಮಾತ್ರ ಮೆಟ್ರೋದೊಳಗೆ ಬಿಡ್ತೀರಾ? ರೈತ ಮೆಟ್ರೋದೊಳಗೆ ಪ್ರಯಾಣಿಸಬಾರದ.? ರೈತ ಇದ್ದ ಸ್ಥಿತಿಯಲ್ಲೇ ಮೆಟ್ರೋ ಪ್ರಯಾಣ ಮಾಡಿದ್ರೆ ಯಾರಿಗೆ ತೊಂದರೆ ಆಗುತ್ತೆ ಎಂದು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಿಬ್ಬಂದಿ ಒಳಪ್ರವೇಶಕ್ಕೆ ಅನುಮತಿ ಕೊಡದಿದ್ರೂ ಸಹ ಪ್ರಯಾಣಿಕ ರೈತನನ್ನು ಮೆಟ್ರೋದೊಳಗೆ ಕರೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಮತ್ತೋರ್ವ ಪ್ರಯಾಣಿಕ ಮೊಬೈಲ್ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಮ್ಮ ಮೆಟ್ರೋ ಸಿಬ್ಬಂದಿ ಅತಿರೇಕದ ವರ್ತನೆಗೆ ನಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ : ರಾಜ್ಯಾದ್ಯಂತ ಮಾರ್ಚ್ 3ರಿಂದ 6ರವರೆಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ


ಇನ್ನು ಈ ಘಟನೆ ಸಂಬಂಧ ರೈತನ ಬಳಿ ಕಟುವಾಗಿ ನಡೆದುಕೊಂಡಿರುವ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನ ವಜಾಗೊಳಿಸಲಾಗಿದೆ. ಮತ್ತೆ ಈ ರೀತಿ ಘಟನೆ ನಡೆಯದಂತೆ ಸಾರ್ವಜನಿಕರಲ್ಲಿ ಬಿಎಂಆರ್ ಸಿಎಲ್ ಕ್ಷಮೆ ಕೋರುವ ಸಂದೇಶ ಎಕ್ಸ್ ಟ್ವಿಟರ್ ಖಾತೆಯಲ್ಲಿ  ಶೇರ್ ಮಾಡಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ