ಮಂಡ್ಯ: ಆಟವಾಡುವಾಗ ಕುಕ್ಕರ್ ವಿಶಲ್ ನುಂಗಿದ ಪರಿಣಾಮ ಒಂದು ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಗ್ರಾಮದ ಮರಿಲಿಂಗೇಗೌಡ ಮತ್ತು ರೂಪಾ ದಂಪತಿಯ ಪುತ್ರ ಭುವನ್ ಗೌಡ(1) ಎಂಬ ಮಗುವೆ ಮೃತಪಟ್ಟ ದುರ್ದೈವಿ. ಶನಿವಾರ ರಾತ್ರಿ ಎಲ್ಲರೂ ಮನೆಯಲ್ಲಿದ್ದಾಗಲೇ ಆಟವಾಡುತ್ತಿದ್ದ ಮಗು, ಇದ್ದಕಿದ್ದಂತೆ ಕೈಗೆ ಸಿಕ್ಕ ಕುಕ್ಕರ್ ವಿಶಲ್ ನುಂಗಿದ ಪರಿಣಾಮ ಅಳಲು ಆರಂಭಿಸಿದೆ. ಕೂಡಲೇ ಮಗನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. 


ಈ ಪ್ರಕರಣ ಸಂಬಂಧ ಮದ್ದೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.