ಧಾರವಾಡ : ಧಾರವಾಡ ಜಿಲ್ಲೆಯ ಕಮಾಲಾಪುರದ ನಿವಾಸಿಗಳಾದ ರೇಣುಕಾ ಬಸರಗಿ ಮತ್ತು ಗೀತಾ ಕಂಬಳಿ ಎಂಬುವವರು ಎದುರುದಾರ ಧಾರವಾಡ ವಿಕಾಸ ಅರ್ಬನ್ ಕ್ರೆಡಿಟ್ ಸೊಸೈಟಿಯಲ್ಲಿ ವಿವಿಧ ದಿನಾಂಕಗಳಂದು ರೂ.4,93,244/-ಗಳನ್ನು ಒಂದು ವರ್ಷ ಮತ್ತು 6 ತಿಂಗಳ ಅವಧಿಗಳಿಗೆ ಮುದ್ದತ್ತುಠೇವಣಿ ಇಟ್ಟಿದ್ದರು.ಠೇವಣಿ ಅವಧಿ ಮುಗಿದ ಮೇಲೆ ಹಣ ಕೊಡುವಂತೆ ದೂರುದಾರರು ಹಲವು ಬಾರಿ ಎದುರುದಾರ ಸೊಸೈಟಿಯವರಿಗೆ ವಿನಂತಿಸಿದರೂ ಅವರು ಠೇವಣಿ ಹಣ ಮತ್ತು ಬಡ್ಡಿಯನ್ನು ವಾಪಸ್ಸು ಕೊಟ್ಟಿರಲಿಲ್ಲ.


COMMERCIAL BREAK
SCROLL TO CONTINUE READING

ಸೊಸೈಟಿಯವರ ಈ ನಡಾವಳಿಕೆಯಿಂದ ತಮಗೆ ಮೋಸವಾಗಿದೆ ಮತ್ತು ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರಿಬ್ಬರು ದಿ:02/11/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.


ಇದನ್ನೂ ಓದಿ: ನಾನೆಂದೂ ಬಿಜೆಪಿ ಬಿಟ್ಟು ಹೋಗಿಲ್ಲ, ಇದು ತಾತ್ಕಾಲಿಕ: ಕೆಎಸ್ ಈಶ್ವರಪ್ಪ ಹೇಳಿಕೆ


ಸದರಿದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಠೇವಣಿ ಅವಧಿ ಮುಗಿದ ಮೇಲೆ ಕರಾರಿನಂತೆ ಬಡ್ಡಿ ಸಮೇತ ಠೇವಣಿದಾರರಿಗೆ ಹಣ ಹಿಂದಿರುಗಿಸುವುದು ಸೊಸೈಟಿಯ ಕರ್ತವ್ಯವಾಗಿದೆ.ಆದರೆ ಠೇವಣಿ ಅವಧಿ ಮುಗಿದ ಸುಮಾರ 2 ರಿಂದ 3 ವರ್ಷ ಕಳೆದರೂ ದೂರುದಾರರಿಗೆ ಠೇವಣಿ ಹಣ ಅಥವಾ ಅದರ ಮೇಲಿನ ಬಡ್ಡಿ ಹಿಂದಿರುಗಿಸದೇ ಇರುವ ಎದುರುದಾರ ಸೊಸೈಟಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.


ದೂರುದಾರರಿಗೆ ಅವರ ಠೇವಣಿ ಹಣಒಟ್ಟು ರೂ.4,93,244/- ಮತ್ತು ಅದರ ಮೇಲೆ ಠೇವಣಿ ರಶೀದಿಯಲ್ಲಿ ನಮೂದಿಸಿದ ಬಡ್ಡಿಯಂತೆ ಠೇವಣಿ ಇಟ್ಟ ದಿನದಿಂದ ದೂರುದಾಖಲಿಸುವವರೆಗೂ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡಬೇಕು ಮತ್ತು ತೀರ್ಪು ನೀಡಿದ ದಿನಾಂಕದಿಂದ ಹಣ ಸಂದಾಯ ವಾಗುವವರೆಗೂ ಠೇವಣಿ ಹಣದ ಮೇಲೆ ಶೇ8% ರಂತೆ ಬಡ್ಡಿ ಸೇರಿಸಿ ದೂರುದಾರರಿಗೆ ಹಿಂದಿರುಗಿಸುವಂತೆ ಆಯೋಗ ಎದುರುದಾರ ಸೊಸೈಟಿಗೆ ನಿರ್ದೇಶಿಸಿದೆ.ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಪರಿಹಾರ ಮತ್ತು ಅವರ ಪ್ರಕರಣ ಖರ್ಚುವೆಚ್ಚ ಅಂತಾ ತಲಾ ರೂ.10,000/-ಗಳನ್ನು ಕೊಡುವಂತೆ ಎದುರುದಾರ ಸೊಸೈಟಿಯವರಿಗೆ ಆಯೋಗ ಆದೇಶಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.