ಬೆಂಗಳೂರು: ಸಿದ್ರಾಮಯ್ಯನವರು ಈ ನಾಡಿಗೆ ಕೊಟ್ಟಂತಹ ಹಲವು ಜನಪರ ಯೋಜನೆಗಳನ್ನ ಜನರು ಮರೆತಿಲ್ಲ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಶ್ಲಾಘಿಸಿದರು.


COMMERCIAL BREAK
SCROLL TO CONTINUE READING

ಅವರು ದಾವಣಗೆರೆಯಲ್ಲಿ ನಡೆದ ಮಾಜಿ ಸಿಎಂ ಸಿದ್ರಾಮಯ್ಯನವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿ ಮಾಡಿದರು.


ನಮ್ಮ ಅಚ್ಚುಮೆಚ್ಚಿನ ರಾಷ್ಟ್ರೀಯ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲು ಬಂದಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ.


ಸಾರ್ವಜನಿಕ ರಾಜಕೀಯ ಜೀವನದಲ್ಲಿ ಇದ್ದವರು 75 ವರ್ಷಗಳನ್ನ ಪೂರೈಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಸೈದ್ದಾಂತಿಕ ಬದ್ಧತೆಯೊಂದಿಗೆ, ಜನಪರ ಆಲೋಚನೆಗಳನ್ನ ನಂಬಿ, ಜನ ಸೇವೆ ಮಾಡುವುದು ಸವಾಲಿನ ಕೆಲಸ. ಅವರ ರಾಜಕೀಯ ಜೀವನದಲ್ಲಿ ಈ ಸನ್ನಿವೇಶ ಮಹತ್ತರ ಘಟ್ಟಗಳಲ್ಲಿ ಒಂದು.


ಇದನ್ನೂ ಓದಿ : ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ


ಫ್ರೋ ನಂಜುಂಡಸ್ವಾಮಿ ಅವರ ಒಡನಾಟದೊಂದಿಗೆ ರಾಜಕೀಯ ರಂಗಕ್ಕೆ ಪ್ರವೇಶ ಪಡೆದು, ಹಲವು ಹುದ್ದೆಗಳನ್ನ, ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ. ಸಿದ್ರಾಮಯ್ಯನವರು ಈ ನಾಡಿಗೆ ಕೊಟ್ಟಂತಹ ಹಲವು ಜನಪರ ಯೋಜನೆಗಳನ್ನ ಜನರು ಮರೆತಿಲ್ಲ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.