ಮಂಡ್ಯ: ದರ್ಶನ್ ಪುಟ್ಟಣ್ಣಯ್ಯ ಇತ್ತಿಚೀನ ಚುನಾವಣೆಯಲ್ಲಿ ರೈತರನ್ನು ಪ್ರತಿನಿಧಿಸುವ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ಮೇಲುಕೋಟೆಯಿಂದ ಕೇತ್ರದಿಂದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸಿ ಗೆಲುವು ಸಾಧಿಸಿದ್ದರು.


COMMERCIAL BREAK
SCROLL TO CONTINUE READING

ಈ ಹಿಂದೆ ರಾಜಕೀಯ ಕ್ಷೇತ್ರಕ್ಕೂ ಬರುವ ಮೊದಲೇ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಆದರೆ ಇದೀಗ ಅವರು ಚುನಾವಣೆ ಬಹುಮತ ಪಡೆದು ಶಾಸಕ ಪಟ್ಟ ಬೆನ್ನಲೇ  ಮೇಲುಕೋಟೆ ಕ್ಷೇತ್ರದಲ್ಲಿ ದ್ವೇಷದ ರಾಜಕೀಯ ಹೆಚ್ಚಾಗುತ್ತಿದೆ. 


ಇದನ್ನೂ ಓದಿ: ಇನ್ಮುಂದೆ ಹಾರ ತುರಾಯಿ ಬೇಡ, ಬದಲಾಗಿ ಪುಸ್ತಕ ನೀಡಿ ಎಂದ ಸಿಎಂ ಸಿದ್ದರಾಮಯ್ಯ


ದರ್ಶನ್ ಪುಟ್ಟಣ್ಣಯ್ಯ ಗೆಲುವಿನ‌ ಬಳಿಕ  ರೈತ ಸಂಘದ ಕಾರ್ಯಕರ್ತರ  ಮೇಲೆ ಜೆಡಿಎಸ್ ನವರ  ದೌರ್ಜನ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.  ದರ್ಶನ್ ಪುಟ್ಟಣ್ಣಯ್ಯ  ಕ್ಷೇತ್ರದ ಮಾಣಿಕನಹಳ್ಳಿ ಕೆಲವು ದಿನಗಳ ಹಿಂದೆ ಕಿಡಿಗೇಡಿಗಳು ರೈತ ಸಂಘದ ಗುತ್ತಿಗೆದಾರನಿಗೆ ಸೇರಿದ ಸಿಮೆಂಟ್‌ ಮೂಟೆಗಳಿಗೆ ಬೆಂಕಿ ಹಚ್ಚಿದ್ದರು.


ಇಂದು ಮತ್ತೆ  ಕ್ಷೇತ್ರದ ಜವನಹಳ್ಳಿಯಲ್ಲಿ ಜೆಡಿಎಸ್ ಪಕ್ಷದ ಕಿಡಿಗೇಡಿಗಳು,  ರೈತ ಸಂಘದ ಕಾರ್ಯಕರ್ತನ ಸಾಲು ಸಾಲು ಅಡಿಕೆ ತೋಟ ಕಡಿದು ಹಾಕಲಾಗಿದೆ ಎಂದು ರೈತ ಸಂಘದ ಕಾರ್ಯರ್ತರು ಆರೋಪಿಸಿದ್ದಾರೆ. 


ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆ ನೀರಿಗೆ ಮುಳುಗಿದ ಕಾರು: ಕಾರಿನಲ್ಲಿದ್ದ ಪುಟ್ಟ ಕಂದಮ್ಮನಿಗಾಗಿ ಶೋಧ


ರೈತ ಸಂಘದ ಕಾರ್ಯಕರ್ತನಾಗಿರುವ ರೈತ ರೈತ ರಾಮಣ್ಣ ಎಂಬುವರ ಅಡಿಕೆ ತೋಟ ಎಂಬುದು ತಿಳಿದು ಬಂದಿದೆ. ಘಟನೆ ಸಂಬಂಧ ಸ್ಥಳಕ್ಕೆ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಪರಿಶೀಲನೆ ನಡೆಸಿ, ಯಾರು ಕೂಡ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡದಂತೆ ಮನವಿ ಮಾಡಿದ್ದಾರೆ. ಸದ್ಯ ರೈತ ರಾಮಣ್ಣಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಧೈರ್ಯ ತುಂಬಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ