ಬೆಂಗಳೂರು: ಮುಂಬೈ ಕರ್ನಾಟಕದಲ್ಲಿ ಹಮ್ಮಿಕೊಂಡಿದ್ದ ಎರಡನೇ ಹಂತದ  ಜನಾಶಿರ್ವಾದ ಯಾತ್ರೆಗೆ ಸಿಕ್ಕಿರುವ ಜನಸ್ಪಂದನೆಗೆ ರಾಹುಲ್ ನಿಜಕ್ಕೂ ಮನಸೋತಿದ್ದಾರೆ. ಈ ಕುರಿತಾಗಿ ಅವರು ಟ್ವಿಟ್ಟರ್ ನಲ್ಲಿ 'ಥ್ಯಾಂಕ್ಯೂ ಕರ್ನಾಟಕ' ಎನ್ನುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.



COMMERCIAL BREAK
SCROLL TO CONTINUE READING

ಬೆಳಗಾವಿ ಜಿಲ್ಲೆಯಿಂದ ಪ್ರಾರಂಭಿಸಿದ್ದ ಜನಾಶಿರ್ವಾದ ಯಾತ್ರೆ ವಿಜಯಪುರ ಮತ್ತು ಹುಬ್ಬಳ್ಳಿ-ಧಾರವಾಡ ಭಾಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಈ ಯಾತ್ರೆಗೆ ಸಿಕ್ಕ ಜನರ ಪ್ರತಿಕ್ರಿಯೆಗೆ  ಸಂತಸಗೊಂಡಿದ್ದಾರೆ. ಈ ಕುರಿತಾಗಿ ತಮ್ಮ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಅವರು " ನಿನ್ನೆ ಮುಗಿದ ಕರ್ನಾಟಕದಲ್ಲಿನ ನಮ್ಮ ಎರಡನೇ ಹಂತದ ಜನಾಶಿರ್ವಾದ್ ಯಾತ್ರೆಯಲ್ಲಿ  ಇಲ್ಲಿನ ಜನರು ತೋರಿಸಿದ ಪ್ರೀತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಶ್ರಮ ಈ ಯಾತ್ರೆಯನ್ನು ಯಶಸ್ಹ್ವಿಗೊಳಿಸಲು ಸಾಧ್ಯವಾಗಿದೆ"ಎಂದು ರಾಹುಲ್ ಗಾಂಧಿ ತಮ್ಮ ಯಾತ್ರೆಯ ವಿಡಿಯೋ ಜೊತೆಗೆ ಟ್ವೀಟ್ ಮಾಡಿದ್ದಾರೆ.