ಬೆಂಗಳೂರು: ಕರ್ನಾಟಕದ ವಿಧಾನಸಭಾ ಚುನಾವಣಾ ಪ್ರಚಾರದ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಚಾರದ ಮಧ್ಯ ದಾವಣಗೆರೆಯ ಪ್ರಸಿದ್ದ ಬೆಣ್ಣೆ ದೋಸೆಗೆ ಮಾರುಹೋಗಿ ಸ್ವಲ್ಪ ಹೊತ್ತು ಬೆಣ್ಣೆ ದೋಸೆ ಸವೆದರು.  



COMMERCIAL BREAK
SCROLL TO CONTINUE READING

ದೋಸೆಯ ರುಚಿಗೆ ನಿಜಕ್ಕೂ ರಾಹುಲ್ ಗಾಂಧಿ ಪಿಧಾ ಆಗಿದ್ದರು. ಇದೇ ವೇಳೆ ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲ್ಲಿಕಾರ್ಜುನ್ ಖರ್ಗೆ,ಜಿ.ಪರಮೇಶ್ವರವರು ಸಾಥ್ ನೀಡಿದರು. ವಿಜಿ ಮಾಲಿಕತ್ವದ ಹೋಟೆಲ್ ನಲ್ಲಿ ಒಟ್ಟು 25 ಬೆಣ್ಣೆ ದೋಸೆಗಳನ್ನು ಸವಿದಿದ್ದಕ್ಕೆ ಡಿಕೆ ಶಿವಕುಮಾರ್ 800 ರೂಪಾಯಿಗಳ ಬಿಲ್ ನೀಡಿದರು.


ಇದೇ ಸಂದರ್ಭದಲ್ಲಿ  ರಾಹುಲ್ ಗಾಂಧಿಯವರು ದಾವಣಗೆರೆಯಲ್ಲಿ ವ್ಯಾಪಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.