ಹಾಸನ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮೂರನೇ ರಾಜ್ಯ ಪ್ರವಾಸಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಮಾರ್ಚ್ 20, 21, 22 ಮೂರು ದಿನ ಮೈಸೂರು ವಿಭಾಗದಲ್ಲಿ ರಾಹುಲ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಆನಂದ್ ಹಾಸನದಲ್ಲಿ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಮೈಸೂರು ವಿಭಾಗದಲ್ಲಿ ಕೈ ಪಕ್ಷ ಬಲಪಡಿಸಲು ರಾಜ್ಯ ಕಾಂಗ್ರೆಸ್ ನಾಯಕರು ತಂತ್ರ ರೂಪಿಸಿದ್ದು, ಚುನಾವಣೆಗೂ ಮುನ್ನ ಮೂರು ದಿನ ಪ್ರವಾಸ ಮಾಡಿ ಪಕ್ಷಕ್ಕೆ ಚೈತನ್ಯ ತುಂಬಲು ಯೋಜನೆ ರೂಪಿಸಿದ್ದಾರೆ.


ರಾಹುಲ್ ಮೂರನೇ ಪ್ರವಾಸದ ವಿವರ ಇಂತಿದೆ


  • ಮಾರ್ಚ್ 20,21,22 ಮೂರು ದಿನ ಮೈಸೂರು ವಿಭಾಗದಲ್ಲಿ ರಾಹುಲ್ ಪ್ರವಾಸ.

  • ಮೂರು ದಿನ 10 ಜಿಲ್ಲೆಗಳಲ್ಲಿ ರಾಹುಲ್ ಪ್ರವಾಸ.

  • ಮೈಸೂರು ವಿಭಾಗದಲ್ಲಿ ರಾಹುಲ್ ಜನಾಶಿರ್ವಾದ ಯಾತ್ರೆ.

  • ಹಾಸನ ಜಿಲ್ಲೆಗೂ ರಾಹುಲ್ ಭೇಟಿ.

  • ಪ್ರವಾಸವೇಳೆ ದೇವಾಲಯ, ಚರ್ಚ್,ಮಸೀದಿಗಳಿಗೆ ಭೇಟಿ ನೀಡಲಿರುವ ರಾಹುಲ್.

  • ವಿದ್ಯಾರ್ಥಿಗಳು, ರೈತರೊಂದಿಗೆ ಸಂವಾದ ನಡೆಸೋ ಬಗ್ಗೆಯು ಕೈ ನಾಯಕರ ಚಿಂತನೆ.