ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲುಂಬಿನಿ ಗಾರ್ಡನ್​​​ನಲ್ಲಿ ನಿರ್ಮಿಸಲಾಗಿದ್ದ ವರನಟ ಡಾ.ರಾಜ್​ ಕುಮಾರ್ (Dr.Rajkumar) ಅವರ ಕಂಚಿನ ಪುತ್ಥಳಿ ಕಳ್ಳತನವಾಗಿದೆ. ಅಣ್ಣಾವ್ರ ಪುತ್ಥಳಿ ಕದ್ದಿರುವ (Theft) ಘಟನೆ ಇದೀಗ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಿಜಾಬ್ ವಿವಾದ: ಶಾಲಾ-ಕಾಲೇಜುಗಳಲ್ಲಿ ಸಾಮರಸ್ಯ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಬಟ್ಟೆಗಳನ್ನು ನಿಷೇಧಿಸಿದ ಕರ್ನಾಟಕ ಸರ್ಕಾರ


ಈ ಸಂಬಂಧ ಅರಣ್ಯ ಅಧಿಕಾರಿ ಯೋಗೇಶ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.‌ ಲುಂಬಿನಿ ಗಾರ್ಡನ್ (Lumbini Garden) ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದ್ದು ರಾಜು ಎಂಬುವರು ನೋಡಿಕೊಳ್ಳುತ್ತಿದ್ದರು. ಯೋಗೇಶ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. 


ಈ ಪ್ರಕರಣ ಸಂಬಂಧ ಇಬ್ಬರ ಮೇಲೆ ಅನುಮಾನ ವ್ಯಕ್ತವಾಗಿದ್ದು, ಅಮೃತಹಳ್ಳಿ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 


ಆರೋಪಿಗಳು ಕದ್ದ ಪುತ್ಥಳಿಯನ್ನು (Rajkumar Statue) ಗುಜರಿ ಅಂಗಡಿಗೆ ನೀಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ‌.


ಇದನ್ನೂ ಓದಿ: Karnataka Budget: ರಾಜ್ಯ ಬಜೆಟ್‌ ತಯಾರಿ; ಫೆ.9 ರಿಂದ ಪೂರ್ವಭಾವಿ ಸಭೆ ನಡೆಸಲು ಸಿ ಎಂ ನಿರ್ಧಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  TwitterFacebook  ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.