ನವ ದೆಹಲಿ: ಹೋರಾಟಗಾರ್ತಿ ಮತ್ತು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ವಿರೋಧಿಸಿ ಅಕ್ಟೋಬರ್ 5 ರಂದು ದೆಹಲಿಯ ಮಂಡಿಹೌಸ್ ನಿಂದ ಜಂತರ್ ಮಂತರ್ ವರೆಗೆ ರ್ಯಾಲಿ ನಡೆಯಲಿದೆ. 


COMMERCIAL BREAK
SCROLL TO CONTINUE READING

ಗೌರಿ ಲಂಕೇಶ್ ಹತ್ಯೆಯಾಗಿ ಸರಿಯಾಗಿ ಒಂದು ತಿಂಗಳಿಗೆ ದೆಹಲಿಯಲ್ಲಿ ರ್ಯಾಲಿ ಕೈಗೊಳ್ಳಲಾಗಿದೆ. ರಾಷ್ಟ್ರೀಯ ದಲಿತ ಅಧಿಕಾರಿ ವೇದಿಕೆಯ ಜಿಗ್ನೇಶ್ ಮೆವಾಣಿ, ಚಿಂತಕ ಅಚಿನ್ ವನಾಯಕ್, ಅಂ ಆದ್ಮಿ ಪಾರ್ಟಿಯ ದಿಲೀಪ್ ಪಾಂಡೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 


ದೇಶದ ವಿವಿಧ ರಾಜ್ಯಗಳಿಂದ ಜನರು ಸಾವಿರಾರು ಸಂಖ್ಯೆಯಲ್ಲಿ ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.