ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಚಿತ್ರನಟಿ ಹಾಗೂ ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಭಾಗವಹಿಸದಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. 


COMMERCIAL BREAK
SCROLL TO CONTINUE READING

ಸೋಶಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ವಿರುದ್ದ ಆಕ್ರೋಶ್ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಅವರ ನಿಧನವಾದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ,ಚಿರಂಜೀವಿ, ಮೋಹನ್ ಬಾಬು ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ದಿಗ್ಗಜರೆಲ್ಲರೂ ಸಹಿತ ಅಗಲಿದ ಗೆಳೆಯನ ಅಂತಿಮ ದರ್ಶನವನ್ನು ಪಡೆದಿದ್ದರು.ಸ್ವತಃ ಮಂಡ್ಯ ಕ್ಷೇತ್ರದಿಂದ ಸಂಸದೆಯಾಗಿದ್ದ ರಮ್ಯ ಈಗ ಅಂತಿಮ ದರ್ಶನ ಮತ್ತು ಅಂತ್ಯ ಕ್ರಿಯೆಯಲ್ಲಿ  ಗೈರು ಹಾಜರಾಗಿದ್ದರಿಂದ ಈಗ ರಮ್ಯಾ ಅವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.


ಅಂಬರೀಶ್ ಅವರು ನಿಧನವಾದ ನಂತರ ಫೆಸ್ ಬುಕ್ ನಲ್ಲಿ ಅವರು " ಅಂಬರೀಷ್ ಅಂಕಲ್ ಅವರ ಸಾವು ಅಪಾರವಾದ ನೋವುಂಟು ಮಾಡಿದೆ.ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲಿ. ಅವರನ್ನು ನಾನು ಎಂದೆಂದಿಗೂ ಪ್ರೀತಿಯಿಂದ ನೆನೆಯುತ್ತೇನೆ." ಎಂದು ಸಂತಾಪ ವ್ಯಕ್ತಪಡಿಸಿದ್ದರು.