ಚಾಮರಾಜನಗರ: ಪ್ರಕೃತಿಯ ಮಡಿಲಲ್ಲಿರುವ ಕರ್ನಾಟಕದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಬೆಟ್ಟದಲ್ಲಿ ಇಂದು ವಿಜೃಂಭಣೆಯಿಂದ ಬಿಳಿಗಿರಿರಂಗನಾಥನ ಬ್ರಹ್ಮ ರಥೋತ್ಸವ ನೆರವೇರಿತು.


COMMERCIAL BREAK
SCROLL TO CONTINUE READING

ಮಂಗಳವಾರ ಬೆಳಗ್ಗೆ 10.50 ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಉತ್ಸವ ಮೂರ್ತಿಯನ್ನು ರಥದಲ್ಲಿಸಿ ಕೂರಿಸಿ ವಿದ್ಯುಕ್ತವಾಗಿ ರಥೋತ್ಸವಕ್ಕೆ ಚಾಲನೆ ಕೊಡಲಾಯಿತು.ವರ್ಷಕ್ಕೆ ಎರಡು ಬಾರಿ‌ ರಥೋತ್ಸವ ನಡೆಯಲಿದ್ದು ಸಂಕ್ರಾಂತಿ ಮರು ದಿನ  ಚಿಕ್ಕಜಾತ್ರೆ ನಡೆದರೇ ಯುಗಾದಿ ಬಳಿಕ ದೊಡ್ಡ ಜಾತ್ರೆ ನಡೆಯಲಿದೆ.


ಇದನ್ನೂ ಓದಿ : ದೇವೆಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ: ಕೃಷ್ಣಭೈರೇಗೌಡ


ವಿಶೇಷವಾಗಿ ಬಿಳಿಗಿರಿರಂಗ ಸೋಲಿಗ ಜನಾಂಗದ ಆರಾಧ್ಯದೈವಯೂ ಆಗಿದ್ದು ರಥೋತ್ಸವಕ್ಕೂ ಮುನ್ನ ಗರುಡ ಪ್ರದಕ್ಷಿಣೆ ಹಾಕುತ್ತದೆ.ಗರುಡನ ಆಗಮನದ ಬಳಿಕವೇ ರಥೋತ್ಸವ ಜರುಗಲಿದೆ ಅದರಂತೆ ಇಂದು ಕೂಡಾ ಗರುಡ ಮೂರು ಬಾರಿ ಪ್ರದಕ್ಷಿಣೆ ಹಾಕಿತು.


ಮಹಾರಥೋತ್ಸವಕ್ಕೆ ತಾಲೂಕು ಆಡಳಿತ ಸಕಲ ಸಿದ್ಧತೆ ಕೈಗೊಂಡಿತ್ತು.  ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟಕ್ಕೆ ದ್ವಿಚಕ್ರ ವಾಹನಗಳ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಸಹಸ್ರಾರು ಮಂದಿ ಭಕ್ತರು ರಂಗನಾಥನ ತೇರು ಎಳೆದು ಪುನೀತರಾದರು.


ಇದನ್ನೂ ಓದಿ : ಸಿದ್ದರಾಮಯ್ಯ ಖುರ್ಚಿ ಉಳಿಯಲ್ಲ ಅನ್ನೋ ಗ್ಯಾರಂಟಿ ಆಗಿದೆ: ಬಸನಗೌಡ ಪಾಟೀಲ್ ಯತ್ನಾಳ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.