ಬೆಂಗಳೂರು: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಕುರಿತಾಗಿ ನಟಿ, ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಮಾಡಿರುವ ಟ್ವೀಟ್ ಪಕ್ಷದಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದೆ. ಈ ನಡುವೆ ಶಾಸಕ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, "ಇದ್ಯಾವ ದೊಡ್ಡ ವಿಚಾರ. ಅದಕ್ಕೆ ಯಾಕೆ ತಲೆಕೆಡಿಸ್ಕೋತೀರಾ. ಯತ್ನಾಳ್ ಅವರು ಹೇಳಿರೋ ವಿಚಾರದ ಮುಂದೆ ಇದ್ಯಾವ ದೊಡ್ಡ ವಿಚಾರ?" ಎಂದು ಹೇಳಿಕೆ ನೀಡಿ ಜಾರಿಕೊಂಡಿದ್ದಾರೆ


COMMERCIAL BREAK
SCROLL TO CONTINUE READING

ಇದನ್ನು ಓದಿ: ಡಿಕೆಶಿ ವಿರುದ್ಧ ಸಿಡಿದೆದ್ದ ಮಾಜಿ ಸಂಸದೆ ರಮ್ಯಾ..!


ಇನ್ನು ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, "ರಮ್ಯಾ ಒಳ್ಳೆಯ ನಟಿ , ಸಂಸದೆಯಾಗಿ ಇದ್ದವರು. ರಮ್ಯಾ ಆರೋಗ್ಯ  ಸ್ಥಿತಿ ಸರಿಯಿಲ್ಲ. ತಪಾಸಣೆ ಮಾಡಲಿ ಅನ್ನುವ ನಳಪಾಡ್ ಹೇಳಿಕೆ ಸರಿಯಲ್ಲ. ಈ ರೀತಿ ಸಾರ್ವಜನಿಕ ಹೇಳಿಕೆ ಕೊಡೋದು ಸರಿಯಲ್ಲ" ಎಂದು ನಲಪಾಡ್ ಹೇಳಿಕೆಯನ್ನು ವಿರೋಧಿಸಿದರು‌.  


ಇನ್ನು ಪಕ್ಷದೊಳಗೆ ಕಾಲೆಳೆಯುವ ಬಗ್ಗೆ ರಮ್ಯಾ ಮಾತಿಗೆ ಪ್ರತಿಕ್ರಿಯಿಸಿ, "ರಾಜಕೀಯವೇ ಹೀಗೆ. ಏನು ಮಾಡೋದು, ಬೆಳೆಯೋವಾಗ ಕಾಲೆಳೆಯೋದೆಲ್ಲ ಸಹಜ ಪ್ರಕ್ರಿಯೆ. ಈ ಬಗ್ಗೆ ಚರ್ಚಿಸೋದರ ಬದಲು ಬೆಲೆಯೇರಿಕೆ ಬಗ್ಗೆ ಟ್ವೀಟ್ ಮಾಡೋಣ ಬಿಡಿ. ನನ್ನ ಕಾಂಗ್ರೆಸ್ ಮಿತ್ರರಿಗೂ ಇದನ್ನೇ ಹೇಳುತ್ತೇನೆ" ಎಂದರು. 


ಇದನ್ನು ಓದಿ: NEET PG 2022: ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌


ಇನ್ನು "ಬಿಜೆಪಿ ನಮ್ಮ ಆಂತರಿಕ ಸಂಘರ್ಷದ ಬಗ್ಗೆ ಮಾತಾನಾಡುವ ಮುನ್ನ, ಯತ್ನಾಳ್ ಬಗ್ಗೆ ಯೋಚಿಸಲಿ. 2500 ಕೋಟಿ ಕೊಟ್ಟಿದ್ರೇ ನಾನು ಸಿಎಂ ಆಗ್ತಿದ್ದೆ ಅಂತಾ ಯತ್ನಾಳ್ ಹೇಳಿದ್ದಾರೆ. ಒಂದು ನೋಟಿಸ್ ಕೂಡಾ ಕೊಟ್ಟಿಲ್ಲ. ಇದರ ಬಗ್ಗೆ ತನಿಖೆ ಮಾಡಲಿ" ಎಂದು ಬಿಜೆಪಿಗೆ ಟಾಂಗ್‌ ನೀಡಿದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.