ಮೈಸೂರು: ದಸರಾ ಅಂಗವಾಗಿ ಸಂಸದೆ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮೈಸೂರು ಅರಮನೆಯ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ದಸರಾ ಜಂಬೂ ಸವಾರಿಯ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶೋಭಾ ಕರಂದ್ಲಾಜೆ ಮಾವುತರಿಗೆ ಕೈಯಾರೆ ತಿಂಡಿ ಬಡಿಸುವ ಮೂಲಕ 'ಆಯುಧ ಪೂಜೆ' ಆಚರಣೆ ಮಾಡಿದರು.


COMMERCIAL BREAK
SCROLL TO CONTINUE READING

ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ಪ್ರತಿ ವರ್ಷದಂತೆ ಈ ವರ್ಷವೂ ಮಾವುತರ ಕುಟುಂಬಕ್ಕೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಈ ವರ್ಷವೂ ಮಾಡಲಾಗುತ್ತಿದೆ. ಮುಂದಿನ ವರ್ಷ ಯಡಿಯೂರಪ್ಪನವರ ನೇತೃತ್ವದಲ್ಲಿ ದಸರಾ ಆಚರಣೆ ಮಾಡಲಾಗುವುದು. ರಾಜ್ಯದ ಜನತೆ ಪರಿವರ್ತನೆ ಬಯಸುತ್ತಿದ್ದಾರೆ. ನವೆಂಬರ್ 2 ರಿಂದ ಪರಿವರ್ತನಾ ರ್ಯಾಲಿ ಆರಂಭವಾಗಲಿದೆ. ತಾಯಿ ಚಾಮುಂಡೇಶ್ವರಿ ನಮಗೆ ಹರಸುತ್ತಾಳೆ ಎಂಬ ನಂಬಿಕೆ ಇದೇ ಎಂದು ಹೇಳಿದರು.