ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ರಾಜ್ಯ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯದಲ್ಲಿ ಜೂನ್ ತಿಂಗಳಿಂದಲೇ ಮುಂಗಾರು ಕೈ ಕೊಟ್ಟು ಬರಗಾಲ‍ದ ಮುನ್ಸೂಚನೆ ಸಿಕ್ಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬರಗಾಲವನ್ನು ತಳ್ಳಿ ಹಾಕುತ್ತಾ, ಹಲವು ದಂಧೆಗಳಲ್ಲಿ ತೊಡಗಿಕೊಂಡಿತ್ತು’ ಎಂದು ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ಇದೀಗ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಹಳ್ಳ ತೊಡಲು ಮುಂದಾದ ಸಿದ್ದರಾಮಯ್ಯರ ಸರ್ಕಾರ ಬರ ಪೀಡಿತ ತಾಲೂಕುಗಳನ್ನು ಸರಿಯಾಗಿ ಸಮೀಕ್ಷೆ ಮಾಡದೆ ಆತುರಕ್ಕೆ ಬಿದ್ದು ಬೆಳಗಾವಿ ಜಿಲ್ಲೆಯ ತಾಲೂಕುಗಳ ಜೊತೆಗೆ ರಾಜ್ಯದ ಹಲವು ತಾಲೂಕುಗಳನ್ನು ಬರ ಪೀಡಿತ ಪಟ್ಟಿಯಿಂದ ಕೈ ಬಿಟ್ಟಿದೆ. ಮಳೆಯೂ ಇಲ್ಲದೆ ಬೆಳೆಯೂ ಕೈಗೆ ಸಿಗದೆ ಅನ್ನದಾತ ಕಂಗಾಲಾಗಿ ಕೂತಿದ್ದಾನೆ. ಬರವೇ ಇಲ್ಲವೆಂದು ಕಾಲಹರಣ ಮಾಡಿದ್ದ #ATMSarkara ಅನುದಾನ ನೀಡಬೇಕೆಂಬ ಕಾರಣಕ್ಕೆ ಬರಪೀಡಿತ ಪಟ್ಟಿಯಿಂದ ರಾಜ್ಯದ ಹಲವು ತಾಲೂಕುಗಳನ್ನು ಹೊರಗಿಟ್ಟು ಅನ್ಯಾಯ ಮಾಡುತ್ತಿದೆ‌’ ಎಂದು ಕುಟುಕಿದೆ.


ವಾಹನ ಕಳುವಾದ್ರೆ ಪೊಲೀಸ್‌ ಠಾಣೆಗೆ ಹೋಗುವ ಅಗತ್ಯವಿಲ್ಲ


ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ‘ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ" ಎಂಬಂತಾಗಿದೆ ಅನ್ನದಾತರ ಬದುಕು! ರಾಜ್ಯದಲ್ಲಿ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ’ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದೆ.


ಸಾಲು ಕೊಡುವ ನೆಪದಲ್ಲಿ ಅನುಚಿತ ವರ್ತನೆ: ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಧರ್ಮದೇಟು!


ಆತ್ಮಹತ್ಯೆ ಮಾಡಿಕೊಂಡ ಜಿಲ್ಲಾವಾರು ರೈತರ ಸಂಖ್ಯೆ


ಹಾವೇರಿ – 29, ಬೆಳಗಾವಿ -21, ಶಿವಮೊಗ್ಗ -16, ಯಾದಗಿರಿ -12, ಚಿಕ್ಕಮಗಳೂರು -12, ಕಲಬುರಗಿ -9, ವಿಜಯನಗರ -8, ಮೈಸೂರು – 8, ಧಾರವಾಡ -7, ಮಂಡ್ಯ -7, ಕೊಪ್ಪಳ- 5, ಚಿತ್ರದುರ್ಗ -5, ಬೀದರ್‌ – 4, ಹಾಸನ -4, ದಾವಣಗೆರೆ -3, ಗದಗ – 3, ವಿಜಯಪುರ -3, ರಾಮನಗರ- 2, ಬಳ್ಳಾರಿ- 2, ರಾಯಚೂರು- 1, ಬಾಗಲಕೋಟೆ-1 ಮತ್ತು ಕೊಡಗು- 1.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.