ಮಂಗಳೂರು: ಗಣೇಶನ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾದುತ್ತಿರುವಾಗಲೇ ಗಾಯಕರೊಬ್ಬರು ಹೃದಯ ಸ್ತಂಬನದಿಂದ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. 


COMMERCIAL BREAK
SCROLL TO CONTINUE READING

ಮಂಗಳೂರಿನ ಬಿಜೈನಲಿ ಮಂಗಳವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕೊಂಕಣಿ ಗಾಯಕ, ಸಂಗೀತ ಸಂಯೋಜಕ ಜೆರಾಲ್ಡ್ ಓಸ್ವಾಲ್ ಡಿಸೋಜ(45) ಎಂಬುವರೇ ಮೃತಪಟ್ಟ ದುರ್ದೈವಿ. 


ಜೆರ್ರಿ ಬಜ್ಜೋಡಿ ಎಂದೇ ಹೆಸರು ಪಡೆದಿದ್ದ ಜೆರಾಲ್ಡ್ ನಾಚ್ ಭಾಂಗಾರಾ ಎನ್ನುವ ಕೊಂಕಣಿ ಆಲ್ಬಂ ಸಾಂಗ್ ರಚಿಸಿದ್ದರು. ನಿನ್ನೆ ಗಣೇಶೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಹಾಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್ ಆದ ಕಾರಣ ವೇದಿಕೆಯಲ್ಲೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.