ಶಿವಮೊಗ್ಗ : ರಕ್ಷಿಸಿದ ನಾಗರ ಹಾವಿಗೆ ಮುತ್ತಿಕ್ಕಲು ಹೋಗಿ ಉರಗ ರಕ್ಷಕ ಕಚ್ಚಿಸಿಕೊಂಡ ಘಟನೆ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ಭದ್ರಾವತಿಯ ಬೊಮ್ಮನ್ ಕಟ್ಟೆ ಬಾರ್ ಲೈನ್‌ನಲ್ಲಿ ಮದುವೆ ಮನೆಯಲ್ಲಿ ಕಾಣಿಸಿಕೊಂಡ ಎರಡು ನಾಗರ ಹಾವುಗಳನ್ನು ಕರ್ನಾಟಕ ಸ್ನೇಕ್ ಕ್ಯಾಚರ್ಸ್ ಸಂಘದ ಅಲೆಕ್ಸ್ ಮತ್ತು ರೋನಿ ಎಂಬುವರು ರಕ್ಷಿಸಿದ್ದಾರೆ. ಈ ವೇಳೆಯಲ್ಲಿ ಒಂದು ಹಾವಿಗೆ ಗಾಯವಾಗಿತ್ತು. ಬೊಮ್ಮನ್ ಕಟ್ಟೆಯ ಬಸ್ ನಿಲ್ದಾಣಕ್ಕೆ ಬರುವ ವೇಳೆಗೆ ರೋನಿ ಯಾವ ಹಾವಿಗೆ ಗಾಯವಾಗಿದೆ ನೋಡೋಣವೆಂದು ಬಾಟಲು ತೆಗೆದಿದ್ದರಂತೆ. ಚೆನ್ನಾಗಿರುವ ಹಾವಿನ ಬಾಟಲ್ ತೆಗೆದ ಕಾರಣ ರೋನಿಗೆ ನಾಗರ ಹಾವು ದಾಳಿಗೆ ಮುಂದಾಗಿತ್ತಂತೆ.


ಇದನ್ನೂ ಓದಿ: ಸಿನಿಮಾರಂಗದಲ್ಲಿ ಹೆಸರು ಮಾಡ್ಬೇಕು ಅಂತಾ ಬಂದ : ಪಿಜಿ ಬಾತ್‌ ರೂಮಲ್ಲಿ ಶವವಾದ..!


ಆದರೆ ರೋನಿಗೆ ಕಚ್ಚುವ ಮುನ್ಸೂಚನೆ ಪಡೆದುಕೊಂಡ ಅಲೆಕ್ಸ್ ಮುತ್ತಿಕ್ಕಲು ಮುಂದಾಗಿದ್ದಾನೆ. ಎದುರಿನ‌ ರೋನಿಗೆ ಕಚ್ಚುವ ಬದಲು ಅಲೆಕ್ಸ್ ನ ಮೇಲ್ತುಟಿ ಮತ್ತು ಕೆಳ ತುಟಿಗೆ ಕಚ್ಚಿದೆ ಎನ್ನಲಾಗಿದೆ. ಇನ್ನು ನೋವಿನಲ್ಲೂ ಹಾವನ್ನ ರಕ್ಷಿಸಿ ಕಾಡಿಗೆ ಬಿಟ್ಟು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ದಿನದ ಬಳಿಕ ಅಲೆಕ್ಸ್ ಮನೆಗೆ ವಾಪಾಸಾಗಿದ್ದಾರೆ.


ಇದನ್ನೂ ಓದಿ: Afghanistan: ಕಾಬೂಲ್‌ನಲ್ಲಿ ಭಾರೀ ಸ್ಫೋಟ, 32 ಮಂದಿ ಮೃತ, 40 ಮಂದಿಗೆ ಗಾಯ


ಈ ಘಟನೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ರಿಪ್ ಎಂದು ಹೇಳುತ್ತಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಪಡೆದುಕೊಳ್ಳುತ್ತಿರುವ ಬಗ್ಗೆ ಅಲೆಕ್ಸ್ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.