ಬೆಂಗಳೂರು: ನಿಗದಿತ ಸಮಯಕ್ಕೆ ಸದನಕ್ಕೆ ಬಂದವರಿಗೆ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಶಾಸಕರಿಗೆ  ಸ್ಪೀಕರ್ ಯು.ಟಿ ಖಾದರ್ ಆಫರ್ ನೀಡಿದರು.


COMMERCIAL BREAK
SCROLL TO CONTINUE READING

ವಿಧಾನಸಭೆಯಲ್ಲಿ‌ ನಿಗದಿತ ಸಮಯಕ್ಕೆ ಶಾಸಕರು ಹಾಜರಾಗುವ ನಿಟ್ಟಿನಲ್ಲಿ ಯು.ಟಿ‌ ಖಾದರ್ ಇಂತಹದೊಂದು ಆಫರ್ ನೀಡಿದ್ದಾರೆ. ಸದನ ಆರಂಭ ಆಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಶಾಸಕರು ಸದನಕ್ಕೆ ಆಗಮಿಸಿದರೆ ಅವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.


ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!


ಇದೇ ಸಂದರ್ಭದಲ್ಲಿ ಮಂಗಳವಾರ  ಸದನಕ್ಕೆ ನಿಗದಿತ ಸಮಯದಲ್ಲಿ ಆಗಮಿಸಿದ ಶಾಸಕರ ಹೆಸರು ಓದಿದ ಸ್ಪೀಕರ್  ಶಾಸಕರ ಬಗ್ಗೆ ಮೆಚ್ಚುಗೆ ಸೂಚಿಸಿದರು.


ಬಹುಮಾನ ಕೊಟ್ಟರೆ ತಪ್ಪು ಸಂದೇಶ!  


ನಿಗದಿತ ಸಮಯಕ್ಕೆ ಸದನಕ್ಕೆ ಆಗಮಿಸಿದ ಶಾಸಕರಿಗೆ ಬಹುಮಾನ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ ಎಂದು ಸ್ಪೀಕರ್ ಖಾದರ್ ಗೆ ಶಾಸಕರೊಬ್ಬರು ಸಲಹೆ ಕೊಟ್ಟರು.


ಬಹುಮಾನ ಘೋಷಣೆ ಬದಲಾಗಿ ಸರ್ಟಿಫಿಕೇಟ್ ಕೊಡಲು ಮನವಿ ಮಾಡಿದರು. ಬಹುಮಾನ ಎಂದರೆ ತಪ್ಪು ಸಂದೇಶ ಹೋಗುತ್ತದೆ. ಬದಲಾಗಿ ಪ್ರಮಾಣ ಪತ್ರ ನೀಡಿ ಎಂದು ಮನವಿ ಮಾಡಿದರು.ಶಾಸಕರ ಅಭಿಪ್ರಾಯಕ್ಕೆ ಸ್ಪೀಕರ್ ಖಾದರ್ ಕೂಡಾ ಸಮ್ಮತಿ ಸೂಚಿಸಿದರು.


ಇದನ್ನೂ ಓದಿ: ಸ್ವಯಂಪ್ರೇರಿತ ಹೇಳಿಕೆಯಲ್ಲಿ ಶ್ರೀಕಿ ಅಸಲಿ ಮುಖ ಅನಾವರಣ


ನನ್ನ ಹೆಸರು ಇಲ್ಲ!  


ನಾನು ಸದನಕ್ಕೆ ನಿನ್ನೆ ಸರಿಯಾದ ಸಮಯಕ್ಕೆ ಬಂದಿದ್ದೇನೆ.ಆದರೆ ನನ್ನ ಹೆಸರು ಇಲ್ಲ ಎಂದು ಸುನೀಲ್ ಕುಮಾರ್ ಹಾಗೂ ನಾಡಗೌಡ ಹೇಳಿದರು. ಬಯೋಮೇಟ್ರಿಕ್ ಹಾಕಿ ಎಂದೂ ನಾಡಗೌಡ ಸಲಹೆ ನೀಡಿದರು.ಮತ್ತೊಂದು ಕಡೆಯಲ್ಲಿ  ಶಾಸಕರಿಗೂ ಮತ್ತು ಸಚಿವರಿಗೆ ಈ ನಿಯಮ ಬೇಡ ಎಂದು ಸಚಿವ  ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.