ಬೆಂಗಳೂರು: ನರಗುಂದದಲ್ಲಿ ಸುಬಾನ್ ಹತ್ಯೆ ಮಾಡಿದವರು ಶ್ರೀರಾಮಸೇನೆ ಅವರು, ಹಾಗೂ ದಿನೇಶ್ ಹತ್ಯೆ ಮಾಡಿದ್ದು ಬಜರಂಗದಳದವರು, ಇವರಿಗೂ ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Yash : ಯಶ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ ಕೊಟ್ಟ ತಾಯಿ ಪುಷ್ಪ


ನಗರದಲ್ಲಿ ಮಾತನಾಡಿದ ಇವರು, ಹೋಮ್ ಮಿನಿಸ್ಟರ್ ಅಸಮರ್ಥರು, ಕಮೀಷನರ್, ಸಿ ಟಿ ರವಿ, ರವಿಕುಮಾರ್ ಒಂದೊಂದು ಹೇಳಿಕೆ ಕೊಡ್ತಾರೆ.ಬಿಜೆಪಿ ಹಿಂದೂಗಳನ್ನ ಪ್ರವೋಕ್ ಮಾಡೋಕ್ಕೆ ಹೊರಟ್ಟಿದೆ.ಕಾನೂನು ಸುವ್ಯವಸ್ಥೆ ಕಾಪಾಡೋಕ್ಕೆ ಇವರಿಗೆ ಆಗಲ್ಲ ,ಹೀಗೆ ಆದ್ರೆ ರಾಜ್ಯ ಬೆಳವಣಿಗೆ ಆಗಲ್ಲ.ಕೈಗಾರಿಕೆಗಳು ಹೊರ ಹೋಗುತ್ತಿವೆ.ಲಾ ಅಂಡ್ ಆರ್ಡರ್ ಸರಿಯಿಲ್ಲ ಅಂದಾಗ ಹೋಗ್ತಾರೆ, ರಾಜ್ಯದಲ್ಲಿ ಉತ್ತಮ ವಾತಾವರಣ ಇರಬೇಕು.ಆಗ ಕೈಗಾರಿಕಾ ಉದ್ಯಮಿಗಳು ಇರ್ತಾರೆ ಎಂದರು.


ಇದನ್ನೂ ಓದಿ: ಕಾಂಗ್ರೆಸ್ ವಿರೋಧಿ ಬಿಜೆಪಿ ಅಲ್ಲ, ಆರ್ ಎಸ್ ಎಸ್..! -ಬಿ.ಕೆ. ಹರಿಪ್ರಸಾದ್


ಹರ್ಷನಿಗೆ ೨೫ ಲಕ್ಷ ಕೊಟ್ಟಿದ್ದಾರೆ,ಆದ್ರೆ ದಿನೇಶ್ ಗೆ ಯಾಕೆ ಕೊಟ್ಟಿಲ್ಲ.ಭಜರಂಗದಳದವನು ಕೊಲೆ ಮಾಡಿದ್ದು. ಇವರಿಗೆ ಬೇಕಾದ ರೀತಿ ಕಾನೂನು ಮಾಡ್ತಾರೆ.ಕಾನೂನು ಎಲ್ಲರಿಗೂ ಒಂದೇ ಅಲ್ವಾ,ಇವರ ಕೈನಲ್ಲಿ ಲಾ ಅಂಡ್ ಆರ್ಡರ್ ನಿಭಾಯಿಸೋಕ್ಕೆ ಆಗಲ್ಲ.ಹಿಂದೂ ಮುಸ್ಲಿಂ ನಡುವೆ ಧ್ವೇಷ ಬೆಳೆಸುತ್ತಿದ್ದಾರೆ. ಹಿಜಾಬ್, ಹಲಾಲ್, ಭಗವದ್ಗೀತೆ, ವ್ಯಾಪಾರ, ಮಾವಿನ ಹಣ್ಣು, ದ್ವನಿವರ್ಧಕ ಹೀಗೆ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ.ಜನರಿಗೆ ಅರ್ಥವಾಗಿದೆ, ಜನರೇ ತಿರುಗಿ ಬೀಳ್ತಾಯಿದ್ದಾರೆ.ನಾವು ತಪ್ಪು ಮಾಡಿದವರ ಪರ ಅಲ್ಲ,ಯಾರೇ ಅಗಲಿ ಶಿಕ್ಷೆಯಾಗಬೇಕು ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.