ಬಾಣಸಂದ್ರ: ತುಮಕೂರಿನ ಬಾಣಸಂದ್ರ ಬಳಿ ಅತೃಪ್ತ ಕಾರ್ಯಕರ್ತ 'ಪರಿವರ್ತನಾ ಯಾತ್ರ ರಥ'ಕ್ಕೆ ಕಲ್ಲು ತೂರಾಟ ನಡೆಸಿದೆ. ಇದರಿಂದಾಗಿ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಅಡ್ಡಿ ಉಂಟಾಗಿದೆ.


COMMERCIAL BREAK
SCROLL TO CONTINUE READING

ಬಾಣಸಂದ್ರ ಬಳಿ ಬಿಎಸ್ವೈ ಕಾರು ನಿಲ್ಲಿಸದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿಯ ಅತೃಪ್ತ ಕಾರ್ಯಕರ್ತ ನಾಗೇಶ್ ಮತ್ತು ಬೆಂಬಲಿಗರು ಪರಿವರ್ತನಾ ಯಾತ್ರಾ ರಥಕ್ಕೆ ಬಾಣಸಂದ್ರ ಬಳಿ ಕಲ್ಲೆಸೆಯಲು ಪ್ರಯತ್ನಿಸಿದ್ದಾನೆ. ಆದರೆ, ಕಲ್ಲು ರಥದ ಬದಲು ಸ್ಕಾರ್ಪಿಯೊ ಕಾರಿಗೆ ತಾಕಿ, ಕಾರಿನ ಗಾಜು ಪುಡಿ ಪುಡಿಯಾಗಿದೆ.   


ನಾಲ್ಕು ದಿನಗಳ ಹಿಂದೆ ನಾಗೇಶ್ ನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.