ಬೆಂಗಳೂರು: ಕಾಂಗ್ರೆಸ್ ಸರ್ಕಾರ(Congress Government) ಕೊಲೆಗಡುಕರನ್ನು ಶಿಕ್ಷಿಸುವ ಬದಲು ರಕ್ಷಣೆ ನೀಡುತ್ತಿತ್ತು ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ. #ಕಾಂಗ್ರೆಸ್‌ತಾಲಿಬಾನ್ ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.


COMMERCIAL BREAK
SCROLL TO CONTINUE READING

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ತಾಲಿಬಾನಿ(Taliban) ಮನಸ್ಥಿತಿಯ ಮತಾಂಧರು ಹಿಂದೂಗಳ ಹತ್ಯೆ‌ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಕೊಲೆಗಡುಕರನ್ನು ಶಿಕ್ಷಿಸುವ ಬದಲು ರಕ್ಷಣೆ ನೀಡುತ್ತಿತ್ತು, ಮತಾಂಧ ಸಂಘಟನೆಗಳ ಕೇಸ್‌ ಹಿಂಪಡೆಯುತ್ತಿತ್ತು. ತಾಲಿಬಾನ್‌ ಮನಸ್ಥಿತಿಗಳಿಗೆ ಕಾಂಗ್ರೆಸ್ ತವರುಮನೆ’ ಎಂದು ಬಿಜೆಪಿ ಕುಟುಕಿದೆ.


ಇದು ರೈತರ ಹೋರಾಟವಲ್ಲ, ದೇಶದ್ರೋಹಿಗಳ ಹೋರಾಟ: ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ


‘ಸಿದ್ದರಾಮಯ್ಯ(Siddaramaiah)ಅವರ ಸರ್ಕಾರದ ಅವಧಿಯಲ್ಲಿ ರಾಜ್ಯ ತಾಲಿಬಾನಿಗಳ ತೆಕ್ಕೆಗೆ ಜಾರಲಾರಂಭಿಸಿತ್ತು. ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಡೆಯಿತು. ಕಾಂಗ್ರೆಸ್ ಸರ್ಕಾರದ‌ ನಾಯಕರು ಹಿಂದೂಗಳ ಕೊಲೆ, ಮಾನಹಾನಿಗೆ ಅಘೋಷಿತ ಫತ್ವಾ ಹೊರಡಿಸಿದ್ದರು. ಆಗ ಗೃಹ ಇಲಾಖೆಯನ್ನು ಎಲ್ಲಿ ಅಡವಿಡಲಾಗಿತ್ತು ಕಾಂಗ್ರೆಸ್?’ ಎಂದು ಬಿಜೆಪಿ ಪ್ರಶ್ನಿಸಿದೆ.


Kashmiri Pandits) ಹಾಗೂ‌ ಹಿಂದೂಗಳನ್ನು ನಾಗರಿಕ ಸಮಾಜ ತಲೆತಗ್ಗಿಸುವ ರೀತಿ ಬಲವಂತವಾಗಿ ಹೊರದಬ್ಬುತ್ತಿದ್ದಾಗ ಕಾಂಗ್ರೆಸ್ ಪಕ್ಷದ ನಾಯಕರು ತಾಲಿಬಾನ್ ಮನಸ್ಥಿತಿಯ ಸಂಘಟನೆಗಳ ಜತೆಗೆ ನೆಂಟಸ್ಥಿಕೆ ನಡೆಸುತ್ತಿದ್ದರು. ಈಗ ಹೇಳಿ ಕಾಂಗ್ರೆಸ್ ನಾಯಕರೇ ತಾಲಿಬಾನ್ ಇರುವುದೆಲ್ಲಿ?. ದೇಶದಲ್ಲಿ ನಡೆದ ಮೂಲಭೂತವಾದಿ, ಭಯೋತ್ಪಾದಕ ಕೃತ್ಯಗಳನ್ನು ಕಾಂಗ್ರೆಸ್ ಪಕ್ಷ ಖಂಡಿಸುವುದಿಲ್ಲ. ಕಾಂಗ್ರೆಸ್‌ ಪಕ್ಷ ಉಗ್ರರ, ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದೆ. ದೇಶದ ಹೊರಗೆ ಧರ್ಮಾಂಧರು ತಾಲಿಬಾನಿಗಳನ್ನು ಸೃಷ್ಟಿಸಿದರು, ದೇಶದ ಒಳಗೆ ತಾಲಿಬಾನಿ ಮನಸ್ಥಿತಿಗಳನ್ನು ಕಾಂಗ್ರೆಸ್‌ ಸೃಷ್ಟಿಸಿತು’ ಅಂತಾ ಬಿಜೆಪಿ ಆರೋಪಿಸಿದೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ಟೋಬರ್ 11 ರವರೆಗೆ ರಾತ್ರಿ ಕರ್ಪ್ಯೂ ವಿಸ್ತರಣೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.