KSRTC Bus: ಈಗಿನ ಕಾಲದಲ್ಲಿ ಎಲ್ಲಾದರೂ ಬೆಲೆಬಾಲುವ ವಸ್ತುಗಳನ್ನ ಇಟ್ಟು ಸ್ವಲ್ಪ ಯಾಮಾರಿದ್ರೂ ಕ್ಷಣಾರ್ದದಲ್ಲಿ ಕದ್ದು ಪರಾರಿಯಾಗುವ ಈ ಕಾಲದಲ್ಲಿ ಕೆ.ಎಸ್.ಆರ್.ಟಿ.ಸಿ. ನಿರ್ವಾಹಕನೊರ್ವ ಬಸ್ ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನ ಅದರ ಮಾಲೀಕರಿಗೆ ತಲುಪಿಸಿ ಮಾದರಿಯಾದ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಗೌರಿಬಿದನೂರು ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ ಹಾಗೂ ಗುಡಿಬಂಡೆ ಮೂಲದ ಜಿ.ಎ. ಓಬಲೇಶ್ ಇತ್ತೀಚೆಗೆ ಕರ್ತವ್ಯ ನಿರ್ವಹಿಸುವ ವೇಳೆ ಪ್ರಯಾಣಿಕರೊಬ್ಬರು ಒಂದು ಲಾಪ್ ಟಾಪ್, ಐಫೋನ್, ಎರಡು ಸಾವಿರ ರೂಪಾಯಿ ಹಣ ಹಾಗೂ ದಾಖಲೆಗಳಿರುವ ಬ್ಯಾಗ್ ನ್ನ ಬಸ್ ನಲ್ಲಿಯೇ ಬಿಟ್ಟುಹೋಗಿದ್ದರು.


ಇದನ್ನೂ ಓದಿ- ಕರ್ನಾಟಕದ ಹಳ್ಳಿಯಲೊಂದು ವಿಶಿಷ್ಟ ಆಚರಣೆ: ದೀಪಾವಳಿ ಹಬ್ಬದಂದು ಯುವತಿಯರು ಅಳುತ್ತಾರೆ!


ಇದನ್ನ ಮನಗಂಡ ನಿರ್ವಾಹಕ ಓಬಲೇಶ್ ಬ್ಯಾಗ್ ಸುರಕ್ಷಿತವಾಗಿ ಇಟ್ಟುಕೊಂಡು ಅದರ ಮಾಲೀಕರಾದ ಹುಚ್ಚೋದನಹಳ್ಳಿ ಕೃಷ್ಣಪ್ಪ ಎನ್ನುವವರನ್ನ ಗೌರಿಬಿದನೂರು ಘಟಕಕ್ಕೆ ಕರೆಸಿ ಘಟಕ ವ್ಯವಸ್ಥಾಪಕ ಶಿವಪ್ಪ ಸಮ್ಮುಖದಲ್ಲಿ ಬೆಲೆಬಾಳುವ ವಸ್ತುಗಳನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.


ಇದನ್ನೂ ಓದಿ- ನಾನು 2 ರೂಪಾಯಿ ಕೊಟ್ಟು ಸಿನಿಮಾ ನೋಡಿದ್ದೇನೆ


ಇಷ್ಟೇ ಅಲ್ಲದೆ ಈ ಹಿಂದೆ ಹಲವು ಪ್ರಯಾಣಿಕರು ಅಮೂಲ್ಯವಾದ ವಸ್ತುಗಳಿರುವ ಬ್ಯಾಗ್ ಗಳನ್ನ ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. ಅವುಗಳನ್ನ ಅದರ ಮಾಲಿಕರಿಗೆ ಹಿಂತಿರುಗಿಸಿದ್ದೇನೆ ಎನ್ನುತ್ತಾರೆ ಓಬಲೇಶ್. ಓಬಲೇಶ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.