6 ಕೋಟಿಗೆ ಬೇಡಿಕೆ ಇಟ್ಟ ಕಿಡ್ನಾಪರ್ಸ್ ಮುನ್ನೂರು ರೂಪಾಯಿ ಕೊಟ್ಟು ಆತನನ್ನು ವಾಪಸ್ ಮನೆಗೆ ಕಳುಹಿಸಿರುವಾಗ ಘಟನೆ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಹೌದು, ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಡಾಕ್ಟರ್ ಸುನಿಲ್ ಅವರನ್ನು ಬೆಳಗಿನ ಜಾವ ವಾಕಿಂಗ್ ಮಾಡುತ್ತಿರುವಾಗ ಕಿಡ್ನಾಪರ್ಸ್ ಬಂದು ಹಲ್ಲೆ ಮಾಡಿ ಆತನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋದರು. ಕಾರಿನಲ್ಲಿ ಹೋಗುವಾಗ ಆತನ ಮೇಲೆ ಹಲ್ಲೆ ಕೂಡ ನಡೆಸಿದರು. ಬಳಿಕ ಆತನ ಅಣ್ಣನಿಗೆ ಕರೆ ಮಾಡಿ ನಿಮ್ಮ ತಮ್ಮನನ್ನು ನಾವು ಕಿಡ್ನಾಪ್ ಮಾಡಿದ್ದೇವೆ. ಕೂಡಲೇ ನಮಗೆ ಚಿನ್ನಾಭರಣ ಸೇರಿದಂತೆ 6 ಕೋಟಿ ಮೌಲ್ಯದ ಹಣವನ್ನು ತಮಗೆ ನೀಡಬೇಕಾಗಿ ಬೆದರಿಕೆ ಹಾಕಿದ್ದಾರೆ. 


ಇದನ್ನು ಕೇಳಿಸಿಕೊಂಡ ಆತನ ಅಣ್ಣ ವೇಣುಗೋಪಾಲ ಪೊಲೀಸರಿಗೆ ಕರೆ ಮಾಡಿ ಈ ಕುರಿತಂತೆ ಮಾಹಿತಿ ನೀಡುತ್ತಾನೆ. ಬಳಿಕ ಪೊಲೀಸರು ಬಳ್ಳಾರಿ ಜಿಲ್ಲೆ ಮಾತ್ರವಲ್ಲದೇ ಬೇರೆ ಬೇರೆ ಜಿಲ್ಲೆಯ ಪೊಲೀಸರಿಗೆ ಈ ಮಾಹಿತಿಯನ್ನು ರವಾನಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಹುಡುಕಾಟ ಆರಂಭಿಸುತ್ತಾರೆ. ಇದನ್ನು ತಿಳಿದ ಕಿಡ್ನಾಪಸ್ ಬಳ್ಳಾರಿ ಜಿಲ್ಲೆ ಹೊರತಾಗಿ ಬೇರೆ ಎಲ್ಲಿಯೂ ಹೋಗದೆ ಅಲ್ಲಿಯೇ ಆತನನ್ನು ಸುತ್ತಾಡಿಸುತ್ತಾರೆ. ಸಂಜೆವರೆಗೂ ಕಾದು ನೋಡಿದ ಕಿಡ್ನಾಪರ್ಸ್ ಗೆ ಒಂದು ರೂಪಾಯಿಯೂ ಹಣ ಸಿಗದೆ ಇದ್ದಾಗ ಬೇಸತ್ತು ಇವನಿಂದ ನಮಗೇನು ಸಿಗುವುದಿಲ್ಲ ಎಂದು ತಿಳಿದು ಕಡೆಗೆ ಬಳ್ಳಾರಿ ಜಿಲ್ಲೆಯ ಜಮೀನ್ ಒಂದರಲ್ಲಿ ಆತನನ್ನು ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋಗುವಾಗ ಸರಿಯಾಗಿ ಮನೆಗೆ ಹೋಗಿ ಸೇರಿಕೋ ಎಂದು ಹೇಳಿ 300 ಕೊಟ್ಟು ಕಳುಹಿಸಿದ ಘಟನೆ ಒಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. 


ಆದರೆ ಆರು ಕೋಟಿಗೆ ಬೇಡಿಕೆ ಇಟ್ಟು ತಮ್ಮದೇ ರೂ.300 ಕೊಟ್ಟು ಕಳುಹಿಸಿರುವುದು ಕೌತುಕವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.