ಬೆಂಗಳೂರು:  ಹಬ್ಬದ ತಯಾರಿಯಲ್ಲಿ  ಹೂ, ಹಣ್ಣು, ತರಕಾರಿ, ಅಗತ್ಯ ವಸ್ತುಗಳನ್ನು  ಕೊಂಡುಕೊಳ್ಳಲು ಮಾರ್ಕೆಟ್‌ ಫುಲ್‌ ತುಂಬಿ ತುಳುಕುತ್ತಿತ್ತು.ನಾಳೆ‌ ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ ಈ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಹಣ್ಣು, ಹೂ, ತರಕಾರಿಗಳ ಬೆಲೆಯು ಏರಿಕೆಯಾಗಿದೆ. ಹಬ್ಬದ ಪ್ರಯುಕ್ತ ನಗರದ ಕೆ.ಆರ್‌. ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಮಾತ್ರ ಜೋರು ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಯಾವ ವಸ್ತುಗಳ ಬೆಲೆ ಹೇಗಿದೆ  ನೋಡೊಣ.... 


ಇದನ್ನೂ ಓದಿ: ಹಿಂದೂ ವಿರೋಧಿ ಬರಹ: ನಟ ಚೇತನ್ ಗೆ 14 ದಿನ‌ ನ್ಯಾಯಾಂಗ ಬಂಧನ


ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ಬೆಲೆ ಡಬಲ್ ಏರಿಕೆಯಾಗಿದೆ. ಬೇವಿನಸೊಪ್ಪು ( 1 ಕಟ್ಟು ) - 20 ರೂ, ಮಾವಿನಸೊಪ್ಪು ( 1 ಕಟ್ಟು ) - 30 ರೂ,  ಚಂಡು ಹೂವು ( 1 ಮಾರು ) - 60 ರೂ,  ಸೇವಂತಿಗೆ ( 1 ಮಾರು ) - 100 ರೂ,  ಗುಲಾಬಿ - ಒಂದು ಕೇಜಿ - 300 ರೂ,  ಸೇವಂತಿಗೆ - ಒಂದು ಕೆಜಿ -ರೂ. 250 -300,  ಮಲ್ಲಿಗೆ - 1 ಕೆಜಿ - ರೂ. 600,  ಕನಕಾಂಬರ 1 kg - 800 ರೂ, ಸುಗಂಧರಾಜ 1 kg - 160 ರೂ , ಚೆಂಡು ಹೂ 1 kg - 80 ರೂ, ತುಳಸಿ ಹಾರ 1 kg - 70  ರೂ. ಬೆಲೆ ಏರಿಕೆ ಆಗಿದ್ದರೂ ಖರೀದಿ ಭರಾಟೆ ಮಾತ್ರ ಜೋರಾಗಿ ಇತ್ತು. 


ಇದನ್ನೂ ಓದಿ: Sarcasm Aadhaar Card: ಉರಿಗೌಡ ನಂಜೇಗೌಡರ ಹೆಸರಿನಲ್ಲಿ ಸೃಷ್ಠಿಯಾಯಿತು ವ್ಯಂಗ್ಯ ಆಧಾರ್ ಕಾರ್ಡ್ https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ