ಬೆಂಗಳೂರು: ಕಾಂಗ್ರೆಸ್​ಗೆ ಶಾಕ್​ ಕೊಟ್ಟು 14 ಮಂದಿ ಶಾಸಕರು ಸಿದ್ದವಿದ್ದು ಇವರೆಲ್ಲರೂ ಬೆಳಗಾವಿ ಬ್ರದರ್ಸ್ ಸಂಪರ್ಕದಲ್ಲಿದ್ದಾರೆ. ಬೆಳಗಾವಿ ಬ್ರದರ್ಸ್​ ಜೊತೆಯೇ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಬೆಳಗಾವಿ ಸಹೋದರರಾದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ವಿಧಾನಸಭೆಯ ಬಲಾಬಲದ ಬಗ್ಗೆ‌ ಲೆಕ್ಕಾಚಾರ ಹಾಕಿದ್ದು  14 ಜನ ಶಾಸಕರನ್ನು ಸೆಳೆಯುವ ತಂತ್ರ ರೂಪಿಸಿದ್ದಾರೆ. ವಿಶೇಷ ಅಂದರೆ ಅವರ ಸಂಪರ್ಕದಲ್ಲಿರುವವರ ಪಟ್ಟಿಯಲ್ಲಿ ಸಚಿವ ಶಂಕರ್ ಮತ್ತು ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಕೂಡ ಇದ್ದಾರೆ.


ಏಕಕಾಲಕ್ಕೆ ಕಾಂಗ್ರೆಸ್​ನ ಆಪ್ತ ಶಾಸಕರ ಜತೆ ಮತ್ತು ಬಿಜೆಪಿ ನಾಯಕರ‌ ಜೊತೆ ನಿರಂತರ ಸಂಪರ್ಕದಲ್ಲಿರುವ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಕೆಲವು ಸ್ಥಳೀಯ ಬಿಜೆಪಿ ನಾಯಕರ‌ ಹೊಂದಾಣಿಕೆಗಾಗಿ ಕಾದುನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಶಾಕ್​ ಕೊಡಲು ಮುಂದಾಗಿರುವ 14 ಮಂದಿ ಶಾಸಕರ ಪಟ್ಟಿ ಹೀಗಿದೆ:


  • ಸತೀಶ್ ಜಾರಕಿಹೊಳಿ

  • ರಮೇಶ್ ಜಾರಕಿಹೊಳಿ

  • ಶಂಕರ್ (ಸಚಿವ)

  • ನಾಗೇಶ್(ಪಕ್ಷೇತರ ಶಾಸಕ)

  • ಶ್ರೀಮಂತ ಪಾಟೀಲ್

  • ಮಹೇಶ್ ಕುಮಠಹಳ್ಳಿ

  • ನಾಗೇಂದ್ರ

  • ಆನಂದ್ ಸಿಂಗ್

  • ಪ್ರತಾಪ್ ಗೌಡ ಪಾಟೀಲ್

  • ಡಿ ಎಸ್ ಹುಲಿಗೇರಿ

  • ಅಮರೇಗೌಡ ಬೈಯ್ಯಾಪುರ

  • ಬಸವನಗೌಡ ದದ್ದಲ್

  • ತುಕಾರಾಮ್

  • ಬಿ ನಾರಾಯಣ್