ಬೆಂಗಳೂರು : ಇಬ್ಬರು ಕಿಲಾಡಿ ಕಳ್ಳರು ಆಂಧ್ರ ಟು ಬೆಂಗಳೂರು ಬಸ್ ಹತ್ತುತ್ತಿದ್ರು. ಕೈಲಿ ಖಾಲಿ ಬ್ಯಾಗ್ ಹಿಡ್ಕೊಂಡು ಬಸ್ ಹತ್ತಿ ರಾತ್ರೋರಾತ್ರಿ ದಾರಿ ಮಧ್ಯೆ ಇಳೀತಿದ್ರು. ಹೀಗೆ ಇಳಿತಿದ್ದೋರು ಖಾಲಿ ಕೈಲಂತೂ ಹೋಗ್ತಿರ್ಲಿಲ್ಲ. ಬಸ್‌ನಲ್ಲಿ ಕಳ್ಳತನ ಮಾಡಿದ್ದ ಮಾಲ್ ಸಮೇತ ಎಸ್ಕೇಪ್ ಆಗ್ತಿದ್ರು. ಹೀಗೆ ಬಸ್ ಗಳಲ್ಲಿ ಲ್ಯಾಪ್ ಟಾಪ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳರಿಬ್ಬರನ್ನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಶಬರೀಶ್, ಫಜೀಲ್ ಪಾಷಾ ಬಂಧಿತ ಆರೋಪಿಗಳು. ಇಬ್ಬರಿಂದ ಒಂಭತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಬರೋಬ್ಬರಿ 39 ಲ್ಯಾಪ್ ಟಾಪ್‌ಗಳನ್ನ ಜಪ್ತಿ ಮಾಡಿದ್ದಾರೆ. ಆಂಧ್ರದಿಂದ ಬೆಂಗಳೂರಿಗೆ ಬಸ್ ಹತ್ತುತ್ತಿದ್ದೋರು ಬೆಂಗಳೂರು ಬಳಿ ಎಲ್ಲಾದ್ರು ಇಳಿದು ವಾಪಸ್ ಹೋಗ್ತಿದ್ರು.. ಅಷ್ಟರಲ್ಲಿ ಲ್ಯಾಪ್ ಟಾಪ್‌ಗಳನ್ನು ಕದ್ದು ಕೈಗೆತ್ತುಕೊಳ್ತಿದ್ರು.


ಇದನ್ನೂ ಓದಿ: ನಮ್ಮ ಹೆಸರಲ್ಲಿ ನೈಸ್ ಆಸ್ತಿ ಇದ್ದರೆ ಇಡೀ ಕುಟುಂಬವೇ ರಾಜಕೀಯ ನಿವೃತ್ತಿ: ಎಚ್.ಡಿ.ಕುಮಾರಸ್ವಾಮಿ


ರಾತ್ರಿ ಜರ್ನಿ ಬಸ್ ಗಳನ್ನೇ ಹತ್ತುತ್ತಿದ್ದ ಆರೋಪಿಗಳು ಬಸ್‌ನಲ್ಲಿರೋ ಪ್ರಯಾಣಿಕರ ವಸ್ತುಗಳನ್ನ ಅಬ್ಸರ್ವ್ ಮಾಡ್ತಿದ್ರು.. ಅವ್ರ ಬಳಿ ಲ್ಯಾಪ್ ಟಾಪ್ ಇದ್ರೆ ಅವ್ರ ಮೇಲೆ ಸಂಪೂರ್ಣ ನಿಗಾ ಇಡ್ತಿದ್ರು.. ರಾತ್ರಿ ಜರ್ನಿ ಟೈಮಲ್ಲಿ ಪ್ರಯಾಣಿಕರು ನಿದ್ದೆ ಮಾಡ್ತಿದ್ದನನ್ನ ಗಮನಿಸಿ ಅವ್ರ ಬಳಿ ಇದ್ದ ಲ್ಯಾಪ್‌ಟಾಪ್ ಗೊತ್ತಿಲ್ದಂಗೆ ತಗೊಂಡು ಖಾಲಿ ಲ್ಯಾಪ್ ಟಾಪ್ ಬ್ಯಾಗ್ ಇಟ್ಟು ಎಸ್ಕೇಪ್ ಆಗ್ತಿದ್ರು.


ಇನ್ನು ಈ ಆರೋಪಿಗಳು ಬರೀ ಕೊಡಿಗೇಹಳ್ಳಿ ಮಾತ್ರ ಅಲ್ಲ, ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೈಚಳಕ ತೋರಿಸಿರೋದು ಗೊತ್ತಾಗಿದೆ. ಸದ್ಯ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಅವ್ರನ್ನ ಜೈಲಿಗಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.