ಕುಮಟಾ: ಕುಮಟಾದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ 'ಟಿಪ್ಪು ಸುಲ್ತಾನ್ ಒಬ್ಬ ಹುಲಿ ಅಲ್ಲ, ಇಲಿ' ಎಂದು ವಾಗ್ದಾಳಿ ನಡೆಸಿದ್ದಾರೆ.

 

ಇಂದು ಕುಮಟಾದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಬಗ್ಗೆ ಮತ್ತೆ ಹರಿಹೈದಿದ್ದಾರೆ. 'ಟಿಪ್ಪುವಿಗೆ ಇಲಿಗೆ ಇರುವ ಯೋಗ್ಯತೆಯೂ ಇಲ್ಲ, ಅವನನ್ನು ಹುಲಿ' ಎಂದು ಇತಿಹಾಸದಲ್ಲಿ ಬರೆದು ಕಾಂಗ್ರೇಸ್ ನವರು ನಮ್ಮ ತಲೆಯಲ್ಲಿ ಕೂರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

 

ಈ ಹಿಂದೆ ಟಿಪ್ಪು ಜಯಂತಿ ಆಮಂತ್ರಣ ಪತ್ರದಲ್ಲಿ ತಮ್ಮ ಹೆಸರನ್ನು ಮುದ್ರಿಸದಂತೆ ಪತ್ರ ಬರೆದು ಸುದ್ದಿಯಲ್ಲಿದ್ದ ಕೇಂದ್ರ ಸಚಿವ ಮತ್ತೊಮ್ಮೆ ಟಿಪ್ಪು ಹೆಸರಿನಲ್ಲಿ ಸುದ್ದಿ ಮಾಡುತ್ತಿದ್ದಾರೆ.