ಬೆಂಗಳೂರು: ಹಲವಾರು ಕಡೆ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ತರಕಾರಿ ಮಾರಾಟಗಾರನಿಗೆ ಸುಮಾರು 42 ಸಾವಿರ ರೂ ದಂಡ ವಿಧಿಸಿದ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಮಡಿವಾಳ ನಿವಾಸಿ ಅರುಣ್ ಕುಮಾರ್ ಅವರಿಗೆ 42,500 ರೂ. ದಂಡ ವಿಧಿಸಲಾಗಿದೆ,ಇದು ಹೆಚ್ಚು ಕಡಿಮೆ ಅವರ ಸೆಕೆಂಡ್ ಹ್ಯಾಂಡ್ ಸ್ಕೂಟರ್‌ನ ಮೊತ್ತದಷ್ಟಾಗುತ್ತದೆ.ಶುಕ್ರವಾರ, ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ತಡೆದು ಎರಡು ಮೀಟರ್ ಉದ್ದದ 42,500 ರೂ ಗಳ ದಂಡವನ್ನು ವಿಧಿಸಲಾಯಿತು.


ಮಡಿವಾಳ ಪೊಲೀಸರ ಪ್ರಕಾರ, ಅವರು ಒಟ್ಟು 77 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅರುಣ್ ಕುಮಾರ್ ಎನ್ನುವ ವ್ಯಕ್ತಿಗೆ 42,500 ರೂಗಳಷ್ಟು ಹಣವನ್ನು ವ್ಯವಸ್ಥೆ ಮಾಡಲು ಮತ್ತು ಮೊತ್ತವನ್ನು ಪಾವತಿಸಲು ಸಮಯವನ್ನು ಕೋರಿದರು, ಈ ಮಧ್ಯೆ, ಪೊಲೀಸರು ಆತನ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.


ಮತ್ತೊಂದು ಘಟನೆಯಲ್ಲಿ ಬೆಂಗಳೂರಿನಿಂದ ತರಕಾರಿ ಮಾರಾಟಗಾರ ಮಂಜುನಾಥ್ ಒಂದು ವರ್ಷದ ಅವಧಿಯಲ್ಲಿ 70 ಬಾರಿ ಹೆಲ್ಮೆಟ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ 15,400 ರೂ.ಗಳ ದಂಡವನ್ನು ವಿಧಿಸಲಾಯಿತು.ದೇಶಾದ್ಯಂತ ಹೊಸ ಸಂಚಾರ ನಿಯಮಗಳನ್ನು ಜಾರಿಗೆ ತಂದಾಗಿನಿಂದ, ಪೊಲೀಸರು ಭಾರಿ ದಂಡ ವಿಧಿಸಿದ ಅನೇಕ ಪ್ರಕರಣಗಳು ವರದಿಯಾಗಿವೆ.