ಚಾಮರಾಜ ನಗರ: ರಾಜ್ಯಾದಾದ್ಯಾಂತ ಮತದಾನ ಆರಂಭವಾಗಿ ಎಲ್ಲೆಡೆ ಮತದಾನದ ಸದ್ದು ಜೋರಾಗಿದೆ. ಈ ಬೆಳ್ಳಗೆ ಹೋಗಿ ಮತದಾನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮತದಾನದ ಪೋಸ್ಟ್‌ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಜನಸಾಮಾನ್ಯರು ಮಾತ್ರವಲ್ಲದೇ ರಾಜಕೀಯ ನಾಯಕರು, ಸಿನಿ ಗಣ್ಯರು ಕೂಡ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬೆನ್ನಲೇ ಎಲ್ಲರಿಗೂ ಹಲವು ನೀರಿಕ್ಷೆ ಮೂಡಿಸಿದೆ. ಹೀಗಿರುವಾಗ ಮತಗಟ್ಟೆಯ ಭೂತ್‌ ಎದುರು ವಾಮಾಚಾರ ಘಟನೆಯೊಂದು ಬೆಳಕಿಗೆ ಬಂದಿದೆ. 


ಇದನ್ನೂ ಓದಿ: Deve Gowda Voted: ಹೆಲಿಕಾಪ್ಟರ್‌ ಮೂಲಕ ಬಂದಿಳಿದು ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು


ಪಟ್ಟಣದ ಉನ್ನತಿಕರಿಸಿದ  ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 103,104,105 ಮೂರು ಬೂತ್ ಗಳಿದ್ದು ಗೇಟಿನ ಮುಂಭಾಗ ಕಿಡಿಗೇಡಿಗಳು ಎರಡು ಕುಡಿಕೆ ಹಾಗೂ ನಿಂಬೆಹಣ್ಣನ್ನು ಹೂತು ಹಾಕಿ, ಕಲ್ಲನ್ನು ಮುಚ್ಚಿ ಹಾಕಿದ್ದಾರೆ.


ಇದನ್ನೂ ಓದಿ: Political Leaders Voted: ಕುಟುಂಬದೊಂದಿಗೆ ಮತದಾನ ಮಾಡಿದ ರಾಜಕೀಯ ನಾಯಕರು..


ಜಿಲ್ಲಾ ಸಶಸ್ತ್ರ  ಮೀಸಲು ಪಡೆಯ ಪೋಲಿಸ್ ವಾಹನ ಶಾಲೆಯೊಳಗೆ ತೆರಳಿದಾಗ ಕುಡಿಕೆಯ ಮೇಲಿದ್ದ ಕಲ್ಲು ಜರುಗಿದ ಸಂದರ್ಭದಲ್ಲಿ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದ್ದು ಯಾರು ವಾಮಾಚಾರ ಮಾಡಿಸಿದ್ದಾರೆ. ಯಾರು ಈ ಹೇಯ ಕೃತ್ಯ ಮಾಡಿದ್ದಾರೆ  ಎಂಬುದು ಮತದಾರರಿಗೆ ಯಕ್ಷಪ್ರಶ್ನೆಯಾಗಿದೆ.


ಈ ವರ್ಷದ ಚುನಾವಣೆಯಲ್ಲಿ ಬಾರಿ ಗದ್ದಲಗಳಿಂದ ಕೂಡಿದೆ. ಇನ್ನು ಕೆಲವು ಕಡೆಗಳಲ್ಲಿ ಮತದಾನ ಮಾಡುತ್ತಿದ್ದಂತೆ ಗಲಭೆಗಳು ಶುರುವಾಗಿದೆ. ಒಟ್ಟಿನಲ್ಲಿ ಸಂಚಲನ ಮೂಡಿಸಿರುವ ಚುನಾವಣೆಯಲ್ಲಿ ಗದ್ದುಗೆ ಯಾರ ಪಾಲಗಲಿದೆ ಎಂಬುದನ್ನು ಚುನಾವಣೆ ಫಲಿತಾಂಶದವರೆಗೂ ಕಾಯಬೇಕಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.